ಸನ್ಮಾರ್ಗ ವಾರ್ತೆ
ಮುಂಬೈ,ಅ.30: ಬಿಜೆಪಿ ನಾಯಕರ ಜೊತೆಗಿನ ಚರ್ಚೆಯಿಂದ ಶಿವಸೇನೆ ಹಿಂದೆ ಸರಿದಿದ್ದು ಶಿವಸೇನೆಯಿಂದ ಯಾರೂ ಇಲ್ಲದೆ ಬಿಜೆಪಿ ನಾಯಕರ ಸಭೆ ಮುಖ್ಯಮಂತ್ರಿಯ ಅಧೀಕೃತ ನಿವಾಸದಲ್ಲಿ ನಡೆಯಿತು.
ಮುಖ್ಯಮಂತ್ರಿ ಸ್ಥಾನವನ್ನು ಎರಡೂವರೆ ವರ್ಷ ಶಿವಸೇನೆಯೊಂದಿಗೆ ಹಂಚುವುದಿಲ್ಲ, ಮುಂದಿನ ಐದು ವರ್ಷ ತಾನೇ ಮುಖ್ಯಮಂತ್ರಿ ಎಂದು ದೇವೇಂದ್ರ ಫಡ್ನವಿಸ್ ಘೋಷಿಸಿದ್ದರಿಂದ ಚರ್ಚೆಯ ಅಗತ್ಯವಿಲ್ಲ ಎಂದು ಶಿವಸೇನೆ ನಿರ್ಧರಿಸಿತ್ತು.
ಸಭೆಗೆ ಮೊದಲು ಬಿಜೆಪಿ ಮಹಾರಾಷ್ಟ್ರ ಉಪಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಪ್ರಸಾದ್ ಲಾಡ್ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆಯವರನ್ನು ಭೇಟಿಯಾಗಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಲಾಡ್ ನಲ್ವತ್ತಕ್ಕೂ ಹೆಚ್ಚು ಶಿವಸೇನೆ ಸದಸ್ಯರಿಗೆ ಬಿಜೆಪಿ, ಶಿವಸೇನೆ ಸರಕಾರ ರಚಿಸಬೇಕೆನ್ನುವ ಅಭಿಪ್ರಾಯ ಇದೆ ಎಂದು ಹೇಳಿದ್ದರು. ಈ ಶಾಸಕರು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು.