ಸನ್ಮಾರ್ಗ ವಾರ್ತೆ
ಆಲಪ್ಪುಝ: ಇಲ್ಲಿಗೆ ಸಮೀಪದ ಹರಿಪ್ಪಾಡಿನಲ್ಲಿ ಬಿಜೆಪಿ ಕಾಯಕರ್ತರೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲವಾದರೂ ಮಂದಿರವೊಂದರಲ್ಲಿ ನಡೆದ ವಿವಾದ ಕಾರಣವೆಂದು ಹೇಳಲಾಗುತ್ತಿದ್ದು ಮೃತ ವ್ಯಕ್ತಿಯನ್ನು ವರ್ಯಕೋಡ್ ಶರತ್ಚಂದ್ರ ಎಂದು ಗುರುತಿಸಲಾಗಿದೆ.
ಆದರೆ, ಡ್ರಗ್ಸ್ ಸಾಗಾಟ ಗೂಂಡಾಗಳು ಶರತ್ಚಂದ್ರರ ಕೊಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆಲಪ್ಪುಝ ಜಿಲ್ಲೆಯಲ್ಲಿ ಮಾದಕ ವಸ್ತು ಮಾಫಿಯ ನಿರಂತರ ಸಮಸ್ಯೆ ಸೃಷ್ಟಿಸುತ್ತಿದ್ದು, ಈ ಹಿಂದೆಯೂ ಇದರ ಕುರಿತು ದೂರುಗಳು ಕೇಳಿ ಬಂದಿದ್ದವು. ಶರತ್ಚಂದ್ರರ ಹತ್ಯೆ ಇತ್ತೀಚೆಗಿನ ಕೃತ್ಯವಾಗಿದ್ದು, ನಿನ್ನೆ ರಾತ್ರೆ ಹನ್ನೆರಡು ಗಂಟೆಗೆ ಕೊಲೆ ನಡೆದಿದೆ. ನಂದು ಪ್ರಕಾಶ್ ನೇತೃತ್ವದ ಏಳು ಮಂದಿಯ ತಂಡ ಕೊಲೆ ನಡೆಸಿದೆ ಎಂದು ಹರಿಪ್ಪಾಡ್ ಪೊಲೀಸರು ತಿಳಿಸಿದ್ದಾರೆ.