ನರೇಂದ್ರ ಮೋದಿ ಯವರು ಸ್ವಾಮೀ ವಿವೇಕಾನಂದರ ಪುನರ್ಜನ್ಮ: ಬಿಜೆಪಿ ಸಂಸದ

0
120

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿಯವರು ಸ್ವಾಮೀ ವಿವೇಕಾನಂದರ ಪುನರ್ಜನ್ಮವಾಗಿದ್ದಾರೆ.” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸೌಮಿತ್ರ ಖಾನ್ ಹೇಳಿದ್ದಾರೆ . ಅವರು ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ “ಸ್ವಾಮೀ ವಿವೇಕಾನಂದರು ಪ್ರಧಾನಿ ನರೇಂದ್ರ ಮೋದಿಯಾಗಿ ಪುನರ್ಜನ್ಮ ಪಡೆದಿದ್ದಾರೆ. ನಮಗೆ ಸ್ವಾಮೀಜಿ ದೇವರಿಗೆ ಸಮಾನವಾಗಿದ್ದಾರೆ. ತನ್ನ ತಾಯಿ ಅಗಲಿದಾಗಲೂ ಪ್ರಧಾನಿ ಮೋದಿ ತನ್ನ ಬದುಕನ್ನು ಈ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅವರು ಆಧುನಿಕ ಭಾರತದ ಸ್ವಾಮಿಯಾಗಿದ್ದಾರೆಂದೂ” ಹೇಳಿದರು.

ಇದರ ವಿರುದ್ದ ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿ ಖಾನ್ ನೀಡಿದ ಹೇಳಿಕೆಯು, ಸ್ವಾಮೀ ವಿವೇಕಾನಂದರಿಗೆ ಮಾಡಿದ ಅವಮಾನವಾಗಿದೆ. ಟಿಎಂಸಿ ಸಚಿವ ಕೋಲ್ಕತ್ತದ ಮೇಯರ್ ಕೂಡಾ ಆಗಿರುವ ಫಿರ್‌ಹಾದ್ ಹಕೀಮ್ ಪ್ರತಿಕ್ರಿಯಿಸಿದ್ದಾರೆ. “ಸ್ವಾಮೀ ವಿವೇಕಾನಂದರ ಬದುಕು, ದೇಶಪ್ರೇಮ, ಆಧ್ಯಾತ್ಮಿಕತೆ, ನನಗೆ ಪ್ರಚೋದಕವಾಗಿದೆ.” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ವಿವೇಕಾನಂದರ ಬದುಕು ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದು ಮೋದಿ ಹಲವು ಬಾರಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.