ಬಿಹಾರದಲ್ಲಿಯೂ ಅರುಣಾಚಲದಂತೆ ಆಗಬಹುದು: ನಿತೀಶ್ ಕುಮಾರ್‌ಗೆ ಕಾಂಗ್ರೆಸ್‍ ಮುನ್ನೆಚ್ಚರಿಕೆ

0
432

ಸನ್ಮಾರ್ಗ ವಾರ್ತೆ

ಕೊಲ್ಕತಾ,ಡಿ.28: ಬಿಹಾರದಲ್ಲಿ ಬಿಜೆಪಿಯ ಕುರಿತು ಕಾಂಗ್ರೆಸ್ ನಿತೀಶ್ ಕುಮಾರ್‌ರನ್ನು ಎಚ್ಚರಿಸಿದ್ದು ಅರುಣಾಚಲದ ಸಿಂಡ್ರೋಮ್ ಬಿಹಾರದಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ಹೇಳಿದೆ. ಅರುಣಾಚಲ ಪ್ರದೇಶದ ಏಳು ಜೆಡಿಯು ಶಾಸಕರಲ್ಲಿ ಆರು ಮಂದಿ ಬಿಜೆಪಿಗೆ ಪಕ್ಷಾಂತಗರವಾಗಿರುವುದನ್ನು ಬೆಟ್ಟು ಮಾಡಿ ನಿತೀಶ್‍ರನ್ನು ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಮುನ್ನೆಚ್ಚರಿಸಿದ್ದಾರೆ.

ಅರುಣಾಚಲದ ಘಟನೆ ಬಿಹಾರದಲ್ಲಿ ಆವರ್ತನೆಯಾಗಬಹುದು. ರಾಜ್ಯದಲ್ಲಿ ಪ್ರತಿಪಕ್ಷದೊಂದಿಗೆ ಒಂದು ಸಂಬಂಧವನ್ನು ಇರಿಸಿಕೊಳ್ಳುವುದು ಪ್ರಯೋಜನಕಾರಿ ಎಂದು ಚೌಧರಿ ಟ್ವೀಟ್ ಮಾಡಿ ಹೇಳಿದ್ದಾರೆ.” ಪ್ರೀತಿಯ ನಿತೀಶ್ ಕುಮಾರ್‌ ಜೀ. ಬಿಜೆಪಿಯ ಬಗ್ಗೆ ಎಚ್ಚರದಲ್ಲಿರಿ. ಈಶಾನ್ಯ ರಾಜ್ಯಗಳ ಪ್ರಾಣಿ ಭೇಟೆಗಾರರಂತೆ ಬೇಟೆಯಾಡಿ ಹಿಡಿಯಲು ನುರಿತದ್ದು ಬಿಜೆಪಿ. ಎಂದು ಅಧೀರ್ ಚೌಧರಿ ಹಾಸ್ಯ ಮಾಡಿದ್ದಾರೆ.

ಅರುಣಾಲದಲ್ಲಿ ತಾವು ಈಗ ಅನುಭವಿಸಿದ್ದು ಬಿಹಾರದಲ್ಲಾಗದಿರಬೇಕಾದರೆ ಪ್ರತಿಪಕ್ಷ ಪಾರ್ಟಿಯೊಂದಿಗೆ ಸಂಬಂಧವನ್ನು ಸ್ಥಾಪಿಸುವುದು ಇತ್ಯಾದಿ ಹೊಸ ತಂತ್ರಗಳನ್ನು ಆವಿಷ್ಕರಿಸಿರಿ ಎಂದು ಚೌಧರಿ ನಿತೀಶ್‍ಗೆ ಸಲಹೆ ನೀಡಿದರು. ಬಿಹಾರದಲ್ಲಿ ನಿತೀಶ್ ಸರಕಾರದ ದೋಸ್ತಿಯಾಗಿರುವಂತೆ ಬಿಜೆಪಿ ಅರುಣಾಚಲದಲ್ಲಿ ಜೆಡಿಯುನ ಆರು ಶಾಸಕರನ್ನು ಬಿಜೆಪಿಗೆ ಎಳೆದು ತಂದಿದೆ. ತಾವು ಮಾತ್ರ ಇದ್ದರೆ ಸಾಕು ಉಳಿದವರನ್ನು ನಾಶಪಡಿಸುವ ಮನೋಸ್ಥಿತಿ ಬಿಜೆಪಿಯದ್ದಾಗಿದೆ ಎಂದು ಚೌಧರಿ ಆರೋಪಿಸಿದರು.