ಕಾಶ್ಮೀರ: ಭಯೋತ್ಪಾದಕರ ದಾಳಿಗೆ ಐವರು ವಲಸೆ ಕಾರ್ಮಿಕರು ಮೃತ್ಯು

0
479

ಶ್ರೀನಗರ,ಅ.30: ಜಮ್ಮು-ಕಾಶ್ಮೀರದ ಕುಲ್‍ಗಾಂ ಜಿಲ್ಲೆಯಲ್ಲಿ ಮಂಗಳವಾರ ಭಯೋತ್ಪಾದಕರ ದಾಳಿಗೆ ಐವರು ಹೊರರಾಜ್ಯದ ವಲಸೆ ಕಾರ್ಮಿಕರು ಹತರಾಗಿದ್ದು, ಓರ್ವ ಗಾಯಗೊಂಡಿದ್ದಾನೆ. ಗಾಯಾಳು ಪಶ್ಚಿಮಬಂಗಾಳದ ನಿವಾಸಿಯಾಗಿದ್ದಾನೆ.

ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ಸದಸ್ಯರು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ಭಯೋತ್ಪಾದಕರು ಹತ್ಯೆ ನಡೆಸಿದ್ದು ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಕಾಶ್ಮೀರಿಗಳಲ್ಲದ ಟ್ರಕ್ ಚಾಲಕರು, ಕಾರ್ಮಿಕರ ಮೇಲೆ ಭಯೋತ್ಪಾದಕರು ಆಕ್ರಮಣ ನಡೆಸುತ್ತಿದ್ದಾರೆ.

ಸೋಮವಾರ ಅನಂತ್ ನಾಗ್‍ನಲ್ಲಿ ಟ್ರಕ್ ಚಾಲಕನ ಹತ್ಯೆಯಾಗಿದೆ. ಈತ ಉಧಂಪುರದ ವ್ಯಕ್ತಿಯಾಗಿದ್ದರು. ಆಗಸ್ಟ್ ಐದರ ಬಳಿಕ ಜಮ್ಮು-ಕಾಶ್ಮೀರದ ಕೊಲೆಯಾದ ನಾಲ್ಕನೆಯ ಚಾಲಕ ಇವರು ಎಂದು ವರದಿ ತಿಳಿಸಿದೆ.