ಯೋಧರ ತ್ಯಾಗವನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ- ಮೆಹಬೂಬ ಮುಫ್ತಿ

0
393

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಯೋಧರ ತ್ಯಾಗವನ್ನು ಮತ ಗಳಿಕೆಗಾಗಿ ಬಿಜೆಪಿ ಹೈಜಾಕ್ ಮಾಡುತ್ತಿದೆ ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆರೋಪಿಸಿದರು.

ಕಾಶ್ಮೀರಿಗಳನ್ನು ಬಲಿಪಶು ಆಗಿಯೂ, ಸೈನಿಕರ ತ್ಯಾಗವನ್ನು ಮತಕ್ಕಾಗಿಯೂ ಬಿಜೆಪಿ ದುರ್ಬಳಕೆ ಮಾಡುತ್ತಿದೆ. ಕಾಶ್ಮೀರಿಗಳು ಮತ್ತು ಸೈನಿಕರನ್ನು ಬಿಜೆಪಿ ಪರಿಗಣಿಸುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಅವರನ್ನು ಪರಿಗಣನೆಯ ವಿಷಯವನ್ನಾಗಿ ಮಾಡಲಾಗುತ್ತಿದೆ ಎಂದು ಮುಫ್ತಿ ಟ್ವಿಟ್ ಮಾಡಿ ಆರೋಪಿಸಿದರು.

ಗಡಿಯನ್ನು ಕಾಯುತ್ತಿರುವ ಸೈನಿಕರ ಪ್ರಾಥಮಿಕ ಕರ್ತವ್ಯವಾಗಿದೆ. ಕಾಶ್ಮೀರ ಪ್ರವಾಸಿಗರಿಗೆ ಅನುಮತಿ ನೀಡಲಾದ ಬಳಿಕ ಎರಡನೆ ಬಾರಿ ಮುಫ್ತಿ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.