ವಲಸೆ ಕಾರ್ಮಿಕರನ್ನು ಕೊಂಡು ಹೋದ ಬಸ್ ಅಪಘಾತ: ಓರ್ವನ ಸಾವು

0
565

ಸನ್ಮಾರ್ಗ ವಾರ್ತೆ

ಭುವನೇಶ್ವರ,ಮೇ.3 : ಅಂತಾರಾಜ್ಯ ವಲಸೆ ಕಾರ್ಮಿಕರನ್ನು ಗುಜರಾತ್‍ನಿಂದ ಒಡಿಸ್ಸಾಕ್ಕೆ ಕರೆದು ಕೊಂಡು ಹೋದ ಬಸ್ ಅಪಘಾತಕ್ಕೊಳಗಾಗಿ ಒಬ್ಬರು ಮೃತಪಟ್ಟಿದ್ದಾರೆ ಇನ್ನೊಬ್ಬನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

ಗುಜರಾತಿನ ಸೂರತ್‍ನಿಂದ ಒಡಿಸ್ಸಾದ ಗಂಜಾಮ್‍ಗೆ ಎಪ್ಪತ್ತು ಕಾರ್ಮಿಕರು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ರಸ್ತೆ ಬದಿಯ ಆವರಣ ಗೋಡೆಗೆ ಬಸ್ ಬಡಿದು ಅಪಘಾತ ನಡೆದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ನಡೆಸಿತು.