ಮತ ಕೇಳುವ ಮೊದಲು ಕೇರಳವನ್ನು ಸೊಮಾಲಿಯಾ ಎಂದಿರುವ ಮೋದಿ ಕ್ಷಮೆಯಾಚಿಸಬೇಕು: ಕಾಂಗ್ರೆಸ್

0
597

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಆಗಮಿಸಲಿದ್ದು, ಉತ್ತಮ ರಾಜ್ಯಗಳಲ್ಲಿ ಒಂದಾದ ಕೇರಳವನ್ನು ಸೊಮಾಲಿಯಾಕ್ಕೆ ಹೋಲಿಸಿದ್ದ ಮೋದಿ ಕೇರಳೀಯರ ಕ್ಷಮೆಯಾಚಿಸಿದ ನಂತರ ಮತ ಕೇಳಬೇಕೆಂದು ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ನಿಮ್ಮ ಇಷ್ಟದ ವ್ಯಕ್ತಿ ಪಿಣರಾಯಿ ವಿಜಯನ್ ಹಾಗೆ ಹೇಳುವುದಿಲ್ಲ. ಆದರೆ ಕೇರಳದೊಂದಿಗೆ ಮೋದಿ ನಿಶ್ಶರ್ತ ಕ್ಷಮೆ ಯಾಚಿಸಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ಸುರ್ಜೇವಾಲ ಹೇಳಿದರು.

2016ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಂದಿದ್ದಾಗ ಮೋದಿ ಕೇರಳವನ್ನು ಸೊಮಾಲಿಯಾಕ್ಕೆ ಹೋಲಿಸಿದ್ದರು. ಕೇರಳದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಕ್ಕಳ ಸಾವನ್ನು ಗುರಿಯಾಗಿರಿಸಿಕೊಂಡು ಮೋದಿ ಹೇಳಿಕೆ ನೀಡಿದ್ದರು. ಮೋದಿಯ ಹೇಳಿಕೆಯ ವಿರುದ್ಧ ಅಂದು ವ್ಯಾಪಕ ಪ್ರತಿಭಟನೆ ನಡೆದಿತ್ತಲ್ಲದೇ, ಸೋಷಿಯಲ್‌ ಮೀಡಿಯಾಗಳಲ್ಲಿ ವ್ಯಾಪಕ ಟ್ರೋಲ್ ನಡೆಸಲಾಗಿತ್ತು.