ಲಕ್ನೊ,ಮೇ 20: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಉತ್ತರ ಪ್ರದೇಶ ಸಚಿವ ರಾಜ್ಭರ್ರನ್ನು ಸಚಿವ ಸಂಪುಟದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ರಾಜ್ಭರ್ರನ್ನು ವಜಾಗೊಳಿಸುವ ಆಗ್ರಹ ಸಲ್ಲಿಸಿದೊಡನೆ ರಾಜ್ಯಪಾಲ ರಾಮ್ ನಾಯಿಕ್ ಅಂಗೀಕರಿಸಿದರು. ರಾಜ್ಭರ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಸಖ್ಯ ಪಕ್ಷವಾದ ಸಉಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ ಅಧ್ಯಕ್ಷರು. 2017ರಿಂದ ಅವರು ಉತ್ತರಪ್ರದೇಶದ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಬಹಿರಂಗ ಟೀಕಾಕಾರಾಗಿ ಪರಿವರ್ತನೆಯಾಗಿದ್ದರು. ಕಳೆದ ತಿಂಗಳೇ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ರಾಜ್ಭರ್ ಹೇಳಿದರು. ಎಕ್ಸಿಟ್ ಪೋಲ್ನಲ್ಲಿ ಬಿಜೆಪಿಗೆ ಭಾರೀ ವಿಜಯ ಲಭಿಸಲಿದೆ ಎಂಬ ಫಲಿತಾಂಶ ಸಿಕ್ಕಿದ ಬೆನ್ನಿಗೆ ರಾಜ್ಭರ್ರನ್ನು ಬಿಜೆಪಿ ಹೊರಹಾಕಿದೆ.