ಸನ್ಮಾರ್ಗ ವಾರ್ತೆ
ರಾಂಚಿ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಲು ಬಯಸಿದ ಪುತ್ರಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತಂದೆ-ತಾಯಿ ಸಹಿತ ನಾಲ್ಕು ಮಂದಿಗೆ ಝಾರ್ಕಂಡಿನ ಜಿಲ್ಲಾ ಕೋರ್ಟು ಮರಣದಂಡನೆ ತೀರ್ಪು ನೀಡಿದೆ.
2018 ಆಗಸ್ಟ್ 25ಕ್ಕೆ ಚಂದ್ವಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮದನ್ಗುಡಿಯಲ್ಲಿ ಸೋನಿ ಕುಮಾರಿ ತಾನು ಅನ್ಯ ಜಾತಿಯ ಯುವಕನನ್ನು ಮದುವೆಯಾಗುವೆ ಎಂದದ್ದಕ್ಕೆ ತಂದೆ-ತಾಯಿ, ಮಾವ-ಮಾವನ ಪತ್ನಿ ಸೇರಿ ಸೋನಿ ಕುಮಾರಿಯ ಕೊಲೆ ಮಾಡಿದ್ದರು.
ಕತ್ತು ಹಿಸುಕಿ ಇವರು ಕೊಲೆಮಾಡಿದ್ದರು. ನಂತರ ಸಾಕ್ಷ್ಯ ನಾಶಪಡಿಸಲು ಇವರು ಸೋನಿಯ ಕುಮಾರಿಯ ಮೃತದೇಹವನ್ನು ಸುಟ್ಟು ಹಾಕಲು ಯತ್ನಿಸಿದ್ದರು. ಅಷ್ಟರಲ್ಲಿ ವಿಷಯ ತಿಳಿದು ಅಲ್ಲಿಗೆ ಪೊಲೀಸರು ಬಂದಾಗ ಸಿಕ್ಕಿಬಿದ್ದಿದ್ದರು. ಈಗ ನಾಲ್ವರಿಗೂ ನ್ಯಾಯಾಲಯ ಗಲ್ಲು ಶಿಕ್ಷೆ ತೀರ್ಪು ನೀಡಿದೆ.