ಸನ್ಮಾರ್ಗ ವಾರ್ತೆ
ಚಂಡಿಗಡ: ಪಂಜಾಬಿನ ತರಣ್ ತಾರಣ್ ಜಿಲ್ಲೆಯ ಸೂಪರ್ ಮಾರ್ಕೆಟ್ವೊಂದರಲ್ಲಿ ಬಿಲ್ ಕುರಿತ ವಿವಾದ ಗುಂಡು ಹಾರಾಟದಲ್ಲಿ ಕೊನೆಗೊಂಡಿದೆ. ಅದೃಷ್ಟಾವಶಾತ್ ಯಾರೂ ಗಾಯಗೊಂಡಿಲ್ಲ. ದುಷ್ಕರ್ಮಿಗಳನ್ನು ಜಯ್ದೀಪ್ ಸಿಂಗ್, ಸನ್ನಿ ದಯಾಲ್ ಎಂಬುದಾಗಿ ಗುರುತಿಸಲಾಗಿದ್ದು, ಡೆಪ್ಯೂಟಿ ಪೊಲೀಸ್ ಸುಪರಿಂಡೆಂಟ್ ಗುರುವಾರ ಸಂಜೆ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.
ಜಯ್ದೀಪ್ ಕುಟುಂಬದೊಂದಿಗೆ ಶಾಪಿಂಗ್ಗೆ ಬಂದಿದ್ದರು. ಬಿಲ್ ಕೊಡುವಾಗ ವಿವಾದ ಹುಟ್ಟಿಕೊಂಡಿತು. ಮಾತಿನ ಚಕಮಕಿಯಲ್ಲಿ ಜಯ್ದೀಪ್ ಕುಟುಂಬ ಮರಳಿತು. ಆದರೆ ಕೆಲವೇ ನಿಮಿಷದ ಬಳಿಕ ಜಯ್ದೀಪ್ ಸಂಗಡಿಗರೊಂದಿಗೆ ಸೂಪರ್ ಮಾರ್ಕೆಟ್ಗೆ ಮರಳಿ ಪುನಃ ಘರ್ಷಣೆಗಿಳಿದಿದ್ದಾರೆ.
ಸೀನಿಯರ್ ಪೊಲೀಸ್ ಸುಪರಿಡೆಂಟ್ ವಸತಿಯ ಸಮೀಪದಲ್ಲಿ ತರಣ್ ತಾರಣ್ ಸೂಪರ್ ಮಾರ್ಕೆಟ್ ಇದೆ. ಇಲ್ಲಿಗೆ ಬಂದ ಜಯ್ದೀಪ್ ತಂಡ ಸೂಪರ್ ಮಾರ್ಕೆಟಿನ ಗಾಜು ಒಡೆದು ಅಕ್ರಮಕ್ಕಿಳಿಯಿತು. ಸಿಬ್ಬಂದಿಗಳು ತಡೆಯಲು ನೋಡಿದರು. ಆಗ ತಂಡ ಗುಂಡು ಹಾರಿಸಿ ಬೆದರಿಸಿದೆ. ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಸೂಪರ್ ಮಾರ್ಕೆಟಿನಲ್ಲಿ ಜನ ನಿಭಿಡತೆ ಇತ್ತು. ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.