ಪತ್ನಿಯ ಮನೆಯವರಿಂದ ಅಪಮಾನ: ಆಹಾರದಲ್ಲಿ ಥಾಲಿಯಂ ಬೆರೆಸಿದ ಪತ್ನಿಯ ಸಹೋದರಿ ಮತ್ತು ತಾಯಿಯ ಕೊಲೆ

0
940

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪತ್ನಿಯ ಮನೆಯವರು ಅಪಮಾನ ಮಾಡಿದಕ್ಕೆ ಪ್ರತೀಕಾರವಾಗಿ ವರುಣ್ ಅರೋರ ಎಂಬಾತ ಪತ್ನಿ ಮತ್ತು ಆಕೆಯ ತಾಯಿಗೆ ಥಾಲಿಯಂ ಆಹಾರದಲ್ಲಿ ಸೇರಿಸಿ ಕೊಲೆ ಮಾಡಿದ ಘಟನೆಯು ವರದಿಯಾಗಿದೆ. ಮೀನಿನ ಪದಾರ್ಥದಲ್ಲಿ ಥಾಲಿಯಂ ಬೆರೆಸಿ ಹತ್ಯೆ ಮಾಡಿದ ವರುಣ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾನೆ.

ವಿಷ ದೇಹದೊಳಗೆ ಸೇರಿರುವ ಪತ್ನಿ ದಿವ್ಯ ಕಳೆದ ಫೆಬ್ರುವರಿಯಿಂದ ಕೋಮದಲ್ಲಿದ್ದಾರೆ. ಪತ್ನಿಯ ತಾಯಿ ಅನಿತಾ ಶರ್ಮ, ಪತ್ನಿಯ ಸಹೋದರಿ ಪ್ರಿಯಾಂಕಾ ಮೃತಪಟ್ಟಿದ್ದಾರೆ. ಥಾಲಿಯಂ ದೇಹದೊಳಗೆ ಪ್ರವೇಶಿಸಿದರೆ ನಿಧಾನವಾಗಿ ಸಾವು ಸಂಭವಿಸುತ್ತದೆ. ಬೇರೆ ಆರೋಗ್ಯ ಸಮಸ್ಯೆ ಸೃಷ್ಟಿಯಾಗಬಹುದು. ಮಾರ್ಚ್ 22ಕ್ಕೆ ಅನಿತಾ ಶರ್ಮ ಥಾಲಿಯಂ ದೇಹದೊಳಕ್ಕೆ ಸೇರಿ ಮೃತಪಟ್ಟಿದ್ದಾರೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ತಿಳಿಸಿದ್ದರು. ನಂತರ ನಡೆದ ತನಿಖೆಯಲ್ಲಿ ಫೆಬ್ರುವರಿ ಥಾಲಿಯಂ ಸೇವನೆಯಿಂದ ಅನಿತಾ ಶರ್ಮರ ಪುತ್ರಿ ದಿವ್ಯ ಸರ್ಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ನಂತರ ಬಿಎಲ್ ಕಪೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇನ್ನೊಬ್ಬಳು ಮಗಳು ಫೆಬ್ರುವರಿ 15ರಂದು ಮೃತಪಟ್ಟಿದ್ದಾರೆ. ಇವರ ದೇಹದಲ್ಲಿ ಥಾಲಿಯಂ ಪ್ರವೇಶಿಸಿದ ಲಕ್ಷಣಗಳ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು.

ದಿವ್ಯರ ತಂದೆ 62 ವರ್ಷದ ದೇವೇಂದ್ರ ಮೋಹನ್ ಶರ್ಮ ದೇಹಾಸ್ವಾಸ್ಥ್ಯದಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಇವರ ದೇಹದಲ್ಲಿ ಥಾಲಿಯಂ‌ನ ಲಕ್ಷಣಗಳಿದ್ದವು. ನಂತರ ತನಿಖೆಯಲ್ಲಿ ವರುಣ್ ಜನುವರಿಯಲ್ಲಿ ಮನೆಗೆ ಬಂದು ಮೀನು ಪದಾರ್ಥ ಮಾಡಿ ಕುಟುಂಬಕ್ಕೆ ಕೊಟ್ಟಿರುವುದು ತಿಳಿದು ಬಂದಿದ್ದು, ನಂತರ ವರುಣ್‍ನ ಮನೆಯಲ್ಲಿ ಪೊಲೀಸರು ಥಾಲಿಯಂ ಪತ್ತೆಹಚ್ಚಿದರು.

ಮಾರ್ಚ್ 23ಕ್ಕೆ ಪೊಲೀಸರು ಅರೋರನನ್ನು ಬಂಧಿಸಿದ್ದರು. ದೇವೆಂದ್ರ ಮೋಹನ್ ಶರ್ಮರ ದೂರಿನಲ್ಲಿ ಬಂಧಿಸಿದ್ದು ಲ್ಯಾಪ್‌ಟಾಪ್‍ನ್ನು ವಶಪಡಿಸಿಕೊಂಡಾಗ ಇಂಟರ್ನೆ‌ಟ್‌ನಲ್ಲಿ ಥಾಲಿಯಂ ಕುರಿತು ಅದರ ಬಳಕೆಯ ಕುರಿತು ಅರೋರ ಹುಡುಕಿರುವುದು ಗೊತ್ತಾಗಿತ್ತು. ನಂತರ ಥಾಲಿಯಂನ್ನು ಆನ್‍ಲೈನ್‍ನಲ್ಲಿ ಖರೀದಿಸಿದ್ದ. ಪತ್ನಿಯ ಮನೆಯವರು ಅಪಮಾನಿಸಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ವರುಣ್ ಅರೋರ ಪೊಲೀಸರಿಗೆ ತಿಳಿಸಿದ್ದಾನೆ.