ಕುವೈಟಿನ ಕೆ. ಸಿ. ಎಫ್. ಸಂಸ್ಥೆಯಿಂದ ಪ್ರವಾಹ ಪೀಡಿತರಿಗೆ 50 ಸಾವಿರ ರೂಪಾಯಿ ನೆರವು

0
357

ಸನ್ಮಾರ್ಗ ವಾರ್ತೆ-

ಕುವೈಟ್ , ಆ. 17; ರಾಜ್ಯದಲ್ಲಿ ಬಂದತಹ ಭೀಕರ ನೆರೆ ಹಾವಳಿಗೆ ಅನಿವಾಸಿ ಭಾರತೀಯರೂ ತೀವ್ರವಾಗಿ ಸ್ಪಂದಿಸುತ್ತಿದ್ದು, ಈ ನಿಟ್ಟಿನಲ್ಲಿ ಕೆ.ಸಿ.ಎಫ್.ಕುವೈಟ್ (ಕರ್ನಾಟಕ ಕಲ್ಚರಲ್ ಫೌಂಡೇಶನ್, ಕುವೈಟ್) ಸಂಸ್ಥೆಯು ತುರ್ತು ಪರಿಹಾರವಾಗಿ 50,000 ರುಪಾಯಿಗಳ ನೀಡಲು ತೀರ್ಮಾನಿಸಿದೆ.

ಇನ್ನೂ ಹೆಚ್ಚಿನ ನೆರವಿಗಾಗಿ ಉದಾರ ದಾನಿಗಳು ಮುಂದೆ ಬರಬೇಕು ಹಾಗೂ ಎಲ್ಲಾ ಪದಾಧಿಕಾರಿಗಳೂ, ಝೋನ್ ನ ಎಲ್ಲಾ ಸದಸ್ಯರೂ ವಿಶೇಷ ಮುತುವರ್ಜಿ ವಹಿಸಬೇಕು ಹಾಗೂ ಆದಷ್ಟು ಬೇಗನೆ ತಮ್ಮ ತಮ್ಮ ಸಹಾಯಗಳನ್ನು ತಲುಪಿಸಬೇಕು ಎಂದು ಸಂಸ್ಥೆಯ ರಾಷ್ಟ್ರೀಯ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜನಾಬ್ ಅಲ್ ಹಾಜ್ ಯಾಕೂಬ್ ರವರು ವಿಶೇಷವಾದ ಮನವಿಯನ್ನು ಮಾಡಿದರು.