ಸನ್ಮಾರ್ಗ ವಾರ್ತೆ
ಸೋಮವಾರಪೇಟೆ: ಕೊರೋನ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಮನೆಗೆ ಹೊರಟ ವೃದ್ಧೆಯನ್ನು ಆಂಬುಲೆನ್ಸ್ನಿಂದ ಕೆಳಗಿಸಿದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ. ಆಸ್ಪತ್ರೆಯಿಂದ ಮನೆಗೆ ಹೊರಟಿದ್ದ ಕಿರಾಗಂತೂರಿನ ಪೊನ್ನಮ್ಮರನ್ನು ಆಂಬುಲೆನ್ಸನಿಂದ ಇಳಿಸಲಾಗಿದ್ದು ರವಿವಾರ ರೋಗದಿಂದ ಅವರು ಗುಣಮುಖರಾಗಿದ್ದರು.
ಕಾಡಾನೆ ಹಾವಳಿಯಿರುವ ಐಗೂರ್ ಸಮೀಪದಲ್ಲಿ ಚಾಲಕ ಪೊನ್ನಮ್ಮರನ್ನು ಆಂಬುಲೆನ್ಸ್ನಿಂದ ಇಳಿಸಿ ಬಿಟ್ಟಿದ್ದಾನೆ. ಪೊನ್ನಮ್ಮರ ಪತಿ ಮತ್ತು ಮಗಳು ಕೊರೋನ ಪೀಡಿತರಾಗಿ ಮನೆಯಲ್ಲಿ ಐಸೊಲೇಶನ್ನಲ್ಲಿದ್ದಾರೆ. ಬಳಲಿದ ಪೊನ್ನಮ್ಮ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಆಟೋ ಚಾಲಕ ಮಗಳು ಶಾಂತಿ ಮತ್ತು ಆರೋಗ್ಯ ಕಾರ್ಯಕರ್ತರ ಸಹಾಯದಿಂದ ಇನ್ನೊಂದು ವಾಹನದಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಆಂಬ್ಯುಲೆನ್ಸ್ ಚಾಲಕನ ಲೋಪಕ್ಕೆ ಜಿಲ್ಲಾ ವೈದ್ಯಾಧಿಕಾರಿ ಡಾ.ಮೋಹನ್ ಕ್ಷಮೆಯಾಚಿಸಿದ್ದು ಚಾಲಕನ ವಿರುದ್ಧ ಕ್ರಮಜರಗಿಸುವುದಾಗಿ ಹೇಳಿದ್ದಾರೆ.