ಭಾರತವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಐಎಂಎ ಅಧ್ಯಕ್ಷರು ಸಂಚು ರೂಪಿಸಿದ್ದಾರೆ- ಬಾಬಾ ರಾಮದೇವ್ ಸಹಾಯಕ ಬಾಲಕೃಷ್ಣ ಆರೋಪ

0
940

ಸನ್ಮಾರ್ಗ ವಾರ್ತೆ

ನವದೆಹಲಿ: ಅಲೋಪತಿ ವಿರುದ್ಧದ ಟೀಕೆಗಳಿಗಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಮದೇವ್ ಅವರನ್ನು ತರಾಟೆಗೆ ತೆಗೆದುಕೊಂಡ ನಂತರ, ಐಎಂಎ ಅಧ್ಯಕ್ಷ “ಡಾ.ಜೆ.ಎ.ಜಯಲಾಲ್‌ರವರು ಭಾರತವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಸಂಚು ರೂಪಿಸುತ್ತಿದ್ದಾರೆ” ಎಂದು ಯೋಗ ಗುರುವಿನ ಸಹಾಯಕ ಆಚಾರ್ಯ ಬಾಲಕೃಷ್ಣ ಆರೋಪಿಸಿದ್ದಾರೆ.

ಇಡೀ ದೇಶವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಪಿತೂರಿ ಇದೆ, ಅದಕ್ಕಾಗಿಯೇ ಯೋಗ ಮತ್ತು ಆಯುರ್ವೇದವನ್ನು ಅಪಚಾರಕ್ಕೆ ಗುರಿಯಾಗಿಸಲಾಗುತ್ತಿದೆ ಎಂದು ಬಾಲಕೃಷ್ಣ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

“ಇಡೀ ದೇಶವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಪಿತೂರಿಯ ಭಾಗವಾಗಿ, ಯೋಗ ಗುರು ರಾಮ್‌ದೇವ್ ಜೀ ಅವರನ್ನು ಗುರಿಯಾಗಿಸಿಕೊಂಡು ಯೋಗ ಮತ್ತು ಆಯುರ್ವೇದವನ್ನು ಅಪಚಾರ ಮಾಡಲಾಗುತ್ತಿದೆ. ದೇಶವಾಸಿಗಳು, ಆಳವಾದ ನಿದ್ರೆಯಿಂದ ಈಗ ಎಚ್ಚರಗೊಳ್ಳಿ ಇಲ್ಲದಿದ್ದರೆ ಮುಂದಿನ ತಲೆಮಾರುಗಳು ನಿಮ್ಮನ್ನು ಕ್ಷಮಿಸುವುದಿಲ್ಲ ”ಎಂದು ಬಾಲಕೃಷ್ಣ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.