ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಅನಾನಸ್ ಹೆಣ್ಣಿನಲ್ಲಿರಿಸಿದ ಸ್ಫೋಟಕ ಸಿಡಿದಿದ್ದರಿಂದ ಗರ್ಭಿಣಿ ಆನೆಯೊಂದು ಸಾವಿಗೀಡಾದ ಘಟನೆ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ನೀಡಿರುವ ಹೇಳಿಕೆಯು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ.
“ಮಲಪ್ಪುರಂ ಕ್ರಿಮಿನಲ್ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಜತೆ ಮಾತನಾಡಿದ್ದ ಮೇನಕಾ ಘಟನೆ ಕುರಿತು ಪ್ರತಿಕ್ರಿಯಿಸಿದ್ದರು.
Mallapuram is know for its intense criminal activity specially with regards to animals. No action has ever been taken against a single poacher or wildlife killer so they keep doing it.
I can only suggest that you call/email and ask for action pic.twitter.com/ii09qmb7xW— Maneka Sanjay Gandhi (@Manekagandhibjp) June 3, 2020
ನಂತರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಬರೆದುಕೊಂಡ ಅವರು. “ಮಲಪ್ಪುರಂ ತನ್ನ ಬಹಳಷ್ಟು ಗಂಭೀರ ಕ್ರಿಮಿನಲ್ ಚಟುವಟಿಕೆಗಳಿಗೆ, ಮುಖ್ಯವಾಗಿ ಪ್ರಾಣಿಗಳಿಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳಿಗೆ ಹೆಸರು ವಾಸಿಯಾಗಿದೆ. ಇಲ್ಲಿ ಪ್ರಾಣಿ ಹತ್ಯೆಗೈಯ್ಯುವ ಒಬ್ಬನೇ ಒಬ್ಬ ವ್ಯಕ್ತಿಯ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಹಾಗೂ ಅವರು ಅಂತಹ ಅಪರಾಧ ಮಾಡುತ್ತಲೇ ಇರುತ್ತಾರೆ. ನೀವು ಕರೆ ಮಾಡಿ/ಇಮೇಲ್ ಮಾಡಿ ಕ್ರಮಕ್ಕೆ ಆಗ್ರಹಿಸಬೇಕೆಂದು ನಾನು ಸಲಹೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
It's murder,Malappuram is famous for such incidents, it's India's most violent district.For instance, they throw poison on roads so that 300-400 birds & dogs die at one time: Maneka Gandhi,BJP MP&animal rights activist on elephant's death after being fed cracker-stuffed pineapple pic.twitter.com/OtLHsuiuAq
— ANI (@ANI) June 3, 2020
ಕೇರಳದ ತ್ರಿಶೂರಿನ ಕೂಡಲಮಾಣಿಕ್ಯಂ ದೇವಾಲಯದಲ್ಲಿ ಆನೆಮರಿಗೆ ಹಿಂಸೆ ನೀಡಲಾಗುತ್ತಿರುವುದಿಂದ ಅದು ಬೇಗನೇ ಸಾಯಬಹುದು ಎಂದೂ ಅವರು ಆರೋಪಿಸಿದ್ದರು.
ಆದರೆ ಆನೆ ಸತ್ತ ದರ್ಘಟನೆಯು ಸಂಭವಿಸಿದ್ದು ಮಲಪ್ಪುರಂನಲ್ಲಿ ಅಲ್ಲ ಬದಲಾಗಿ ಪಾಲಕ್ಕಾಡ್ನಲ್ಲಾಗಿದೆ ಎಂದು ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, “ಗರ್ಭಿಣಿ ಕಾಡಾನೆಯು ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿ ಅರಣ್ಯದಿಂದ ಹತ್ತಿರದ ಗ್ರಾಮಕ್ಕೆ ಆಹಾರವನ್ನರಿಸಿ ಹೋಗಿದ್ದು, ಸ್ಫೋಟಕ ತುಂಬಿದ್ದ ಪೈನಾಪಲ್ ಹಣ್ಣು ತಿಂದಾಗ ಸಂಭವಿಸಿದ ಸ್ಫೋಟದಿಂದಾಗಿ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯವಾಗಿತ್ತು. ತದನಂತರ ತಿನ್ನಲು ಅಶಕ್ತವಾಗಿದ್ದ ಆನೆಯು ತಿನ್ನಲು ಹಾಗೂ ನಡೆಯಲು ಸಾಧ್ಯವಾಗದೆ ಕೊನೆಗೆ ನದಿಯಲ್ಲಿ ನಿಂತಿರುವಾಗಲೇ ಅದು ಸತ್ತಿದೆ” ಎಂದಿದ್ದಾರೆ.
ಮಲಪ್ಪುರಂನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೇನಕಾ ಗಾಂಧಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದು ಅವರನ್ನು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ, ಸುದ್ದಿ ಸಂಸ್ಥೆಗಳಾದ ಎಎನ್ಐ, ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ಝೀ ನ್ಯೂಸ್, ಇಂಡಿಯಾ ಟಿವಿ, ನ್ಯೂಸ್ 18, ಹಿಂದುಸ್ತಾನ್ ಟೈಮ್ಸ್, ಫಸ್ಟ್ ಪೋಸ್ಟ್ ಸಹಿತ ಹಲವು ಆಂಗ್ಲ ಮತ್ತು ಹಿಂದಿ ಮಾಧ್ಯಮಗಳು ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿತ್ತು ಎಂದು ತಪ್ಪಾಗಿ ವರದಿ ಮಾಡಿದ್ದು, ಈ ನಡುವೆ ನೂರಾರು ಬಿಜೆಪಿ ಬೆಂಬಲಿಗರು ಮೇನಕಾರ ಟ್ವೀಟ್ ಬಳಸಿ ದ್ವೇಷ ಹರಡತ್ತಿದ್ದಾರೆ ಎನ್ನಲಾಗಿದೆ.
Indian Izlamists have a particular hatred for #Elephant, cows, and monkeys because these #AnimalPeople are symbols of Hindu faith system
The brutal murder of the pregnant #elephant in Kerala's Muslim majority Malappuram district is perhaps part of this same hateful mindset pic.twitter.com/0LeC9KyQgp
— Chayan Chatterjee (@Satyanewshi) June 3, 2020
The incident of killing #Elephant took place in Palakkad district of Kerala.
Muslim majority district Malappuram has always been a target for the sangh brigade for known reasons.
This 'Animal right activist' has used the opportunity to demonise the people of the district. https://t.co/P3bMa9JTqW
— Aysha Renna (@AyshaRenna) June 3, 2020
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.