ಸನ್ಮಾರ್ಗ ವಾರ್ತೆ
ನವದೆಹಲಿ: 2021ರ ಮಾರ್ಚ್ 31ರೊಳಗೆ ಗ್ರಾಹಕರ ಎಲ್ಲಾ ಖಾತೆಗಳೊಂದಿಗೆ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬ್ಯಾಂಕ್ಗಳಿಗೆ ಹೇಳಿದರು.
“ನಿಮ್ಮ ಬ್ಯಾಂಕಿನ ಗ್ರಾಹಕರ ಖಾತೆಗಳಲ್ಲಿ ಅಗತ್ಯ ಇರುವ ಖಾತೆಗಳಲ್ಲಿ ಪಾನ್ ಸಂಖ್ಯೆ ದೃಢೀಕರಣ ಹಾಗೂ ಎಲ್ಲ ಖಾತೆಗಳಲ್ಲಿ ಆಧಾರ್ ಸಂಖ್ಯೆ ನೋಂದಾಯಿಸಿ ಕೊಂಡಿವೆಯೇ ಎಂಬುದನ್ನು ದೃಢಪಡಿಸಿಕೊಳ್ಳುಬೇಕು” ಎಂಬುದಾಗಿ ಅವರು ಬ್ಯಾಂಕುಗಳಿಗೆ ಹೇಳಿದರು. ಡಿಜಿಟಲ್ ಅಲ್ಲದ ಪಾವತಿಗಳನ್ನು ಬ್ಯಾಂಕುಗಳು ನಿರುತ್ತೇಜಿಸಬೇಕು ಎಂದು ಅವರು ಹೇಳಿದರು.