ಉವೈಸಿ ಜಿನ್ನಾರ ಅವತಾರ, ಅವರಿಗೆ ನೀಡುವ ಪ್ರತಿಯೊಂದು ಮತ ಭಾರತಕ್ಕೆ ವಿರುದ್ಧ- ತೇಜಸ್ವಿ ಸೂರ್ಯ

0
417

ಸನ್ಮಾರ್ಗ ವಾರ್ತೆ

ಹೈದರಾಬಾದ್,ನ.24: ಕಾರ್ಪೊರೇಷನ್ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಐಎಂಐಎಂ ನಾಯಕ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿಯವರನ್ನು ಪಾಕಿಸ್ತಾನದ ರಾಷ್ಟ್ರಪಿತ ಮುಹಮ್ಮದಲಿ ಜಿನ್ನಾರಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಸ್ಥಳೀಯಾಡಳಿತ ಚುನಾವಣೆ ಪ್ರಚಾರದಲ್ಲಿ ಉವೈಸಿಯ ವಿರುದ್ಧ ಮಾತಾಡಿದ ಅವರು ಜಿನ್ನ ಅವತಾರವಾದ ಉವೈಸಿಗೆ ಕೊಡು ಪ್ರತಿಯೊಂದೂ ಮತ ಭಾರತದ ವಿರುದ್ಧವಾಗಿರುತ್ತದೆ ಎಂದಿದ್ದಾರೆ.

ಉವೈಸಿ ಸಹೋದರ ಅಕ್ಬರುದ್ದೀನ್ ಉವೈಸಿ ಕೋಮುವಾದ ಮತ್ತು ಒಡಕು ಸೃಷ್ಟಿಸುವ ರಾಜಕೀಯ ಮಾಡುತ್ತಿದ್ದಾರೆ. ಅವರು ಹೈದರಬಾದಿನ ಅಭಿವೃದ್ಧಿಯನ್ನು ತಂದಿಲ್ಲ. ರೋಹಿಂಗ್ಯನ್ನರನ್ನು ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ. ನೀವು ಉವೈಸಿಗೆ ಮತ ಹಾಕಿದರೆ ಆತ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಕರ್ನಾಟಕದ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಶಕ್ತಿಶಾಲಿಯಾಗುತ್ತಾರೆ. ಯಾರು ಈ ಉವೈಸಿ, ಜಿನ್ನಾರ ಹೊಸ ಅವತಾರ. ನಾವು ಅವರನ್ನು ಸೋಲಿಸಬೇಕು. ಬಿಜೆಪಿಗೆ ನೀವು ನೀಡುವ ಪ್ರತಿಯೊಂದು ವೋಟು ಭಾರತಕ್ಕೂ ಹಿಂದುತ್ವಕ್ಕೂ ಇರುವುದಾಗಿದೆ. ಅದು ನಮ್ಮ ದೇಶವನ್ನು ಶಕ್ತಗೊಳಿಸುತ್ತದೆ. ಉವೈಸಿಗೆ ನೀಡುವ ಮತ ಭಾರತದ ವಿರುದ್ಧ ಮತ ಎಂದು ತೇಜಸ್ವಿ ಸೂರ್ಯ ಹೇಳಿದರು.

ಡಿಸೆಂಬರ್ ಒಂದಕ್ಕೆ ಹೈದರಾಬಾದ್ ಕಾರ್ಪೊರೇಷನ್ ಚುನಾವಣೆ ನಡೆಯಲಿದ್ದು ತೆಲಂಗಾಣದ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಟಿಆರ್‍ಎಸ್ ಬಳಿಯಿದ್ದ ದುಬ್ಬುಕಲ್ ಸೀಟಿನಲ್ಲಿ ಬಿಜೆಪಿ ವಿಜಯಗಳಿಸಿದ್ದು ಹೆಚ್ಚಿನ ನಿರೀಕ್ಷೆಯಲ್ಲಿದೆ.