‘ಅನ್ಯಾಯದ ವಿರುದ್ಧ ನಾವು ಹೋರಾಡುತ್ತೇವೆ’: ಪ್ರಿಯಾಂಕ, ರಾಹುಲ್ ಗಾಂಧಿಯಿಂದ ಹಾಥ್ರಸ್ ಸಂತ್ರಸ್ತೆಯ ಕುಟುಂಬದೊಂದಿಗೆ ಭೇಟಿ

0
555

ಸನ್ಮಾರ್ಗ ವಾರ್ತೆ

ಹಾಥ್ರಸ್,ಅ.3:ಯುಪಿ ಪೊಲೀಸರ ತೀವ್ರ ವಿರೋಧದ ನಡುವೆಯೂ ಹಾಥ್ರಸ್ ಅತ್ಯಾಚಾರ, ಕೊಲೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುವಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಯಶಸ್ವಿಯಾದರು. ರಾತ್ರಿ 7.20 ಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಥ್ರಸ್‌ ತಲುಪಿದರು. ರಾಹುಲ್  ಮತ್ತು ಪ್ರಿಯಾಂಕಾ ಸಹಿತ ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ ಮತ್ತು ಪಿ.ಎಲ್.ಪುನಿಯಾ ಕೂಡ ಸಂತ್ರಸ್ತೆಯ ಕುಟುಂಬವನ್ನು ಸಂದರ್ಶಿಸಿದರು.

ಈ ವೇಳೆ ಸಂತ್ರಸ್ತೆಯ ತಾಯಿಯನ್ನು ಆಲಿಂಗಿಸಿ ಸಾಂತ್ವನ ಹೇಳಿದ ಪ್ರಿಯಾಂಕಾ ಗಾಂಧಿ, “ಅನ್ಯಾಯದ ವಿರುದ್ಧ ನಾವು ಹೋರಾಡುತ್ತೇವೆ” ಎಂಬುದಾಗಿ ಹೇಳಿದರು.

ಕೊರೋನ ಪ್ರೊಟೋಕಾಲ್ ನಿಯಮಗಳೊಂದಿಗೆ ಇತರ ನಿಬಂಧನೆಗಳನ್ನು ವಿಧಿಸಿದ ಯುಪಿ ಪೊಲೀಸರು ಸಂತ್ರಸ್ತೆಯ ಕುಟುಂಬದೊಂದಿಗೆ ಭೇಟಿಯಾಗಲು ಕಾಂಗ್ರೆಸ್ ನಾಯಕರಿಗೆ ಅನುಮತಿ ನೀಡಿದ್ದಾಗಿ ವರದಿಯಾಗಿದೆ.