ಯಾವುದೇ ಧರ್ಮ ದ್ವೇಷವನ್ನು ಕಲಿಸುವುದಿಲ್ಲ: ಉಪಕುಲಪತಿ ಪ್ರೊ.ಎಡಪಡಿತ್ತಾಯ

0
288

ಸನ್ಮಾರ್ಗ ವಾರ್ತೆ

ಎಚ್ಐಎಫ್ ಇಂಡಿಯಾ ವತಿಯಿಂದ ನಡೆದ ಒಂದು ತಿಂಗಳ ಪ್ರವಾದಿ ಮಹಮ್ಮದ್(ಸ) ಜೀವನ ಮತ್ತು ಸಂದೇಶ, ಸೀರತ್ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮವು ಎಚ್ಐಎಫ್ ಅಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಹುಟ್ಟು ಸಾಮಾನ್ಯ ಮರಣದ ನಂತರ ನಮ್ಮನ್ನು ಹಾಗೂ ನಾವು ಮಾಡಿದಂತಹ ಒಳ್ಳೆಯ ಕಾರ್ಯಗಳನ್ನು ನೆನೆದು ನಮಗಾಗಿ ಪ್ರಾರ್ಥಿಸುವರು ಇರುವುದಾದರೆ ನಮ್ಮ ಜೀವನ ಸಾರ್ಥಕ, ಯಾವುದೇ ಧರ್ಮವು ದ್ವೇಷವನ್ನು ಅಕ್ರಮವನ್ನು ಕಲಿಸುವುದಿಲ್ಲ. ಜ್ಞಾನದ ಕೊರತೆ ಮಾತ್ರ ಪರಸ್ಪರ ದ್ವೇಷಕ್ಕೆ ಕಾರಣವಾಗುತ್ತದೆ. “ರಬ್ಬಿ ಜಿದ್ನಿ ಇಲ್ಮ” ನಮ್ಮ ಜ್ಞಾನವನ್ನು ಹೆಚ್ಚಿಸು ಎಂಬ ಕುರ್‌ಆನಿನ ವಾಕ್ಯವನ್ನು ನೆನಪಿಸಿದರು.COVID ಮಹಾಮಾರಿಯ ಸಂದರ್ಭದಲ್ಲಿ ಎಚ್ಐಎಫ್ ನ ತಂಡ ಮಾಡಿದಂತಹ ಸಮಾಜಮುಖಿ ಕಾರ್ಯಗಳು ನಿಜವಾಗಿಯೂ ಶ್ಲಾಘನೀಯ ಎಂದು ನುಡಿದರು.

ಪರಸ್ಪರ ಧರ್ಮಗಳು ಕಲಿಸಿಕೊಡುವ ಒಳ್ಳೆಯ ವಿಚಾರಗಳನ್ನು ಒಳ್ಳೆಯ ಮಾತುಗಳನ್ನು ಒಳ್ಳೆಯ ಸಭೆಗಳನ್ನು ನಾವು ಪ್ರಚಾರ ಪಡಿಸಬೇಕು ಹೊರತು.ಅಕ್ರಮಗಳು ಅನ್ಯಾಯಗಳು ದ್ವೇಷ ಭಾಷಣಗಳನ್ನು ಹೊಂದಿರುವಂತಹ ಪ್ರಚಾರಗಳನ್ನು ಕೈ ಬಿಡುವ ಮೂಲಕ ನಾವು ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ಮಸ್ಜಿದುಲ್ ಹುದಾ ಮಸೀದಿಯ ಖತೀಬರಾದ ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟರು.

ಮತ್ತೋರ್ವ ಮುಖ್ಯ ಅತಿಥಿ ಕಾರ್ಪೊರೇಟರ್ ನವೀನ್ ಡಿಸೋಜರವರು ಉಪಸ್ಥಿತರಿದ್ದರು. ಎಚ್ಐಎಫ್ ಇಂಡಿಯಾ ಅಧ್ಯಕ್ಷ ನಾಜಿಮ್ ಏಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಜಿದ್ ಏಕೆ ಪ್ರಾಸ್ತಾವಿಕ ನುಡಿದರು, ದಿಷನ್ ಇಕ್ಬಾಲ್ ಕಾರ್ಯಕ್ರಮವನ್ನು ನಿರೂಪಿಸಿ ರಿಜ್ವಾನ್ ಪಾಂಡೇಶ್ವರ ವಂದಿಸಿದರು.