ಸವದತ್ತಿ: ಇಸ್ಲಾಮೀ ಶರೀಅತ್ – ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ

0
352

ಸನ್ಮಾರ್ಗ ವಾರ್ತೆ

ಸವದತ್ತಿ(ಬೆಳಗಾವಿ ಜಿ): ತಾಲೂಕು ನ್ಯಾಯವಾದಿಗಳ ಸಂಘದ ವತಿಯಿಂದ ಪಟ್ಟಣದ ಕೋರ್ಟ್ ಹಾಲ್ ನಲ್ಲಿ ಇಸ್ಲಾಮೀ ಶರೀಅತ್ ಬಗ್ಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಉಪನ್ಯಾಸವನ್ನು ನೀಡಿದರು. ಉಪನ್ಯಾಸದ ನಂತರ ವಕೀಲರು ರಾಜ್ಯ ಕಾರ್ಯದರ್ಶಿಯವರೊಂದಿಗೆ ವಿಷಯದ ಕುರಿತು ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸೇರಿದಂತೆ ವಕೀಲರು ಭಾಗವಹಿಸಿದ್ದರು. ಇಸ್ಲಾಂ ಹಾಗೂ ಶರೀಅತ್ ಬಗ್ಗೆ ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಮೆಹಬೂಬ್ ಆಲಮ್ ಬಡಗನ್ ಹಾಗೂ ಜಿಲ್ಲಾ ಸಂಚಾಲಕ ಯಾಸೀನ್ ಮಕಾನದಾರ್ ಉಪಸ್ಥಿತರಿದ್ದರು.