ದೊರೆಸ್ವಾಮಿ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಸಾದ್ ಬೆಳಗಾಮಿ ಸಂತಾಪ

0
563

ಸನ್ಮಾರ್ಗ ವಾರ್ತೆ

ಬೆಂಗಳೂರು: ಹಿರಿಯ ಸಾಮಾಜಿಕ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್. ದೊರೆಸ್ವಾಮಿ ಯವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾದ ದಿ. ದೊರೆ ಸ್ವಾಮಿಯವರು ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದರು. ಅಲ್ಲದೆ ದೀನ ದಲಿತ, ಅಲ್ಪಸಂಖ್ಯಾತರ, ರೈತರ ಜತೆ ಅವರ ಹಕ್ಕುಗಳಿಗಾಗಿ ನಿರಂತರ ಹೋರಾಟಗಳಲ್ಲಿ ನಿರತರಾಗಿರುತ್ತಿದ್ದರು.

ಉತ್ತಮ ಚಾರಿತ್ರ್ಯದ ದೊರೆ ಸ್ವಾಮಿಗಳು, ಗಾಂಧಿವಾದಿಯಾಗಿ ದ್ದರಲ್ಲದೆ ಜನ ಪರ ಸಂಘಟನೆಗಳಿಗೆ ಸದಾ ಮಾರ್ಗದರ್ಶಕರಾಗಿದ್ದರು. ಅಲ್ಲದೆ ಅವರ ನಾಯಕತ್ವವನ್ನು ವಹಿಸಿ ಅವರನ್ನು ಸದಾ ಹುರಿದುಂಬಿಸುವ ನೇತಾರರಾಗಿದ್ದರು.

ಶತಾಯುಷಿಯಾಗಿ ಬದುಕಿದ ಹೋರಾಟಗಾರನ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ, ಅವರ ಸಹಪಾಠಿಗಳಿಗೆ, ಎಲ್ಲಾ ಜನಪರ ಸಂಘಟರಿಗೆ ನೀಡಲಿ ಎಂದು ಡಾ. ಬೆಳಗಾಮಿ ಮುಹಮ್ಮದ್ ಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.