ಹೊಸದಿಲ್ಲಿ, ಮಾ.14: ಕಾಂಗ್ರೆಸ್ನ ಮಾಜಿ ಮಾಧ್ಯಮ ವಕ್ತಾರ ಟಾಂ ವಡಕ್ಕನ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರಿಂದ ಟಾಂ ವಡಕ್ಕನ್ ಬಿಜೆಪಿ ಸದಸ್ಯತ್ವ ಸ್ವೀಕರಿಸಿದರು.
ಪುಲ್ವಾಮ ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ಕಾಂಗ್ರೆಸ್ ನೀಡಿದ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದೆನೆಂದು ಅರು ಪತ್ರಕರ್ತರಿಗೆ ತಿಳಿಸಿದರು. ಪುಲ್ವಾಮ ದಾಳಿಯಲ್ಲಿ ಕಾಂಗ್ರೆಸ್ ನೀಡಿದ ಪ್ರತಿಕ್ರಿಯೆ ಸಖೇದಾಶ್ಚರ್ಯದೆಂದು ಅವರು ಹೇಳಿದರು.
ತೀರಾ ದುಃಖದಲ್ಲಿ ತಾನು ಬಿಜೆಪಿ ಸೇರಿದ್ದೇನೆ. ಆದರೆ ಬಿಜೆಪಿಯಲ್ಲಿ ಸೇರಿದ್ದಕ್ಕೆ ಸಂತೋಷವಿದೆ. ತನಗೆ ಎಲ್ಲ ಬೆಂಬಲ ನೀಡುವುದಾಗಿ ಬಿಜೆಪಿ ಭರವಸೆ ಕೊಟ್ಟಿದೆ ಎಂದು ಅವರು ತಿಳಿಸಿದರು.