ಕಮಲೇಶ್ ತಿವಾರಿ ಕೊಲೆ ಪ್ರಕರಣ: ಇನ್ನಿಬ್ಬರ ಬಂಧನ

0
923

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಅ.23: ಉತ್ತರ ಪ್ರದೇಶದಲ್ಲಿ ಹಿಂದೂ ಸಮಾಜ್ ಪಾರ್ಟಿ ನಾಯಕ ಕಮಲೇಶ್ ತಿವಾರಿ ಕೊಲೆ ಪ್ರಕರಣದಲ್ಲಿ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೂರತಿನ ಅಶ್ಫಾಕ್ ಶೇಖ್(34), ಮೊಯಿನುದ್ದೀನ್ ಪಠಾನ್(27) ಬಂಧಿತರು. ಮಂಗಳವಾರ ಸಂಜೆ ಇವರನ್ನು ಬಂಧಿಸಲಾಗಿದೆ. ಗುಜರಾತ್-ರಾಜಸ್ಥಾನ ಗಡಿಯ ಶಂಲಾಜಿನಿಂದ ಇವರನ್ನು ಸೆರೆಹಿಡಿಯಲಾಯಿತು ಎಂದು ಗುಜರಾತ್ ಭಯೋತ್ಪಾದಕ ವಿರೋಧಿ ತನಿಖಾ ದಳ ತಿಳಿಸಿದೆ.

ಅಕ್ಟೋಬರ್ 18 ರಂದು ತಿವಾರಿ ಕೊಲೆಯಾಗಿದ್ದರು. ಕೊಲೆ ಕೃತ್ಯದ ಬಳಿಕ ನೇಪಾಳಕ್ಕೆ ಓಡಿ ಹೋಗಿದ್ದ ಇಬ್ಬರು ಆರೋಪಿಗಳು ಗುಜರಾತಿಗೆ ಮರಳುತ್ತಿದ್ದ ಸಮಯದಲ್ಲಿ ಪೊಲೀಸರು ತಿಳಿಸಿದರು. ಪ್ರಕರಣದಲ್ಲಿ ಐದು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು.