ಆಮ್ ಆದ್ಮಿ ಶಾಸಕ ಕಪಿಲ್ ಮಿಶ್ರಾ ಇಂದು ಬಿಜೆಪಿಗೆ

0
427

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.17: ಕೇಜ್ರಿವಾಲ್ ಸರಕಾರದಲ್ಲಿ ಸಚಿವರಾಗಿದ್ದ ಕಪಿಲ್ ಮಿಶ್ರ ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಕಪಿಲ್ ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ನಿಟ್ಟಿನಲ್ಲಿ ಪಕ್ಷಾಂತರ ಕಾಯಿದೆ ಅನ್ವಯ ದಿಲ್ಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಿದ್ದರು.

ಕಪಿಲ್ ಮಿಶ್ರ ನಿನ್ನೆ ಟ್ವೀಟ್ ಮಾಡಿದ್ದು ತಾನು ಶನಿವಾರ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ದಿಲ್ಲಿಯ ಬಿಜೆಪಿ ಪ್ರಮುಖ ನಾಯಕರು ಇದನ್ನು ದೃಢೀಕರಿಸಿದ್ದಾರೆ. ಒಂದು ಹಂತದಲ್ಲಿ ಕಪಿಲ್ ಮಿಶ್ರ ಕೇಜ್ರಿವಾಲ್‍ರ ನಿಕಟವರ್ತಿಯಾಗಿದ್ದವರು. ದಿಲ್ಲಿ ಬಿಜೆಪಿ ನೀಡಿದ ಪ್ರಕಟಣೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್ ಜಾಜು ಮತ್ತು ದಿಲ್ಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಯ ಉಪಸ್ಥಿತಿಯಲ್ಲಿ ಶನಿವಾರ ಪ್ರದೇಶ ಕಾರ್ಯಾಲದಯಲ್ಲಿ ಕೆಲವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ.