ಕಾರ್ಕಳ: ವಿದ್ಯಾರ್ಥಿ, ಹೆತ್ತವರೊಂದಿಗೆ ಸಂವಾದ

0
264

ಸನ್ಮಾರ್ಗ ವಾರ್ತೆ

ಕಾರ್ಕಳ: ಜ.ಇ.ಹಿಂದ್ ಕಾರ್ಕಳ ವತಿಯಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರೊಂದಿಗೆ ಸಂವಾದದ ಕಾರ್ಯಕ್ರಮವನ್ನು ಇತ್ತೀಚಿಗೆ ಸ್ಥಳೀಯ ಮದೀನಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಬಿ.ಐ.ಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್, ” ಹೆತ್ತವರು ಮಕ್ಕಳ ಲೌಕಿಕ ಯಶಸ್ಸಿಗಾಗಿ ಪ್ರಯತ್ನಿಸುವಂತೆ ಅವರ ಪರಲೋಕದ ವಿಜಯಕ್ಕಾಗಿಯೂ ಅಷ್ಟೇ ಗಮನವನ್ನು ನೀಡಬೇಕು, ಪಾಲಕರು ಇಸ್ಲಾಮೀ ಶಿಕ್ಷಣದ ಬೆಳಕಿನಡಿಯಲ್ಲಿ ತಮ್ಮ ಮಕ್ಕಳನ್ನು ತರಬೇತಿಗೊಳಿಸಬೇಕು ಎಂದವರು ಕರೆ ನೀಡಿದರು.”

ಕಾರ್ಯಕ್ರಮವು ಮುಫ್ತಿ ಅಬೂ ಶಮಾ ಅವರ ಕುರ್ ಆನ್ ಉದ್ಭೋದನೆಯೊಂದಿಗೆ ಪ್ರಾರಂಭಗೊಂಡಿತು, SIO ಉಡುಪಿ ಜಿಲ್ಲಾಧ್ಯಕ್ಷ ಶೇಖ್ ಅಯಾನ್ ಪ್ರಸ್ತಾವಿಕ ಭಾಷಣಗೈದರು, ಹುಮೇರಾ ಕಾರ್ಕಳ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.