ಸನ್ಮಾರ್ಗ ವಾರ್ತೆ
ಭಾರತ್ ಜೋಡೋದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರು ಎಲ್ಲೆಲ್ಲಾ ನಡೆದರೋ ಆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಭಾರತ್ ಜೋಡೋ ಯಾತ್ರೆ ನಡೆಸಿದ್ದು ಆ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಚರ್ಚೆಗೆ ಕಾರಣವಾಗಿದೆ.
2022 ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿಯವರ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆ ಕರ್ನಾಟಕ ಪ್ರವೇಶಿಸಿತ್ತು. ಬದನಾವಾಲಿನಿಂದ ಅವರು ಯಾತ್ರೆ ಆರಂಭಿಸಿದರು. ಬಳಿಕ ಮೈಸೂರು ಪ್ರವೇಶಿಸಿದರು. ಅಕ್ಟೋಬರ್ 4ರಂದು ಮಂಡ್ಯಕ್ಕೆ ಬಂದರು. ಎರಡು ದಿನಗಳ ವಿರಾಮದ ಬಳಿಕ ಮಂಡ್ಯದಿಂದ ಯಾತ್ರೆ ಆರಂಭಿಸಿದರು. ಅಕ್ಟೋಬರ್ ಏಳರಂದು ಗೌರಿ ಲಂಕೇಶ್ ಅವರ ಕುಟುಂಬ ಈ ಭಾರತ್ ಯಾತ್ರೆಯಲ್ಲಿ ಪಾಲ್ಗೊಂಡಿತು. ಅಕ್ಟೋಬರ್ 8ರಂದು ತುಮಕೂರು ಜಿಲ್ಲೆಯ ಮಾಯಸಂದ್ರದಿಂದ ಯಾತ್ರೆ ಆರಂಭಿಸಿದರು. ಅಕ್ಟೋಬರ್ ಒಂಬತ್ತರಂದು ತಿಪಟೂರಿನಿಂದ ಯಾತ್ರೆ ಆರಂಭಿಸಿದರು. ಅಕ್ಟೋಬರ್ 10ರಂದು ತುಮಕೂರು ಜಿಲ್ಲೆಯಲ್ಲಿ ಯಾತ್ರೆ ಮುಂದುವರಿಸಿದರು. ಹನ್ನೊಂದರಂದು ಚಿತ್ರದುರ್ಗದಿಂದ ಯಾತ್ರೆ ಪ್ರಾರಂಭಿಸಿದರು. 15ರಂದು ಅವರ ಯಾತ್ರೆ ಬಳ್ಳಾರಿ ಪ್ರವೇಶಿಸಿತು. ಈ ಬಗ್ಗೆ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ಸವ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ.