ಸನ್ಮಾರ್ಗ ವಾರ್ತೆ
ಕೇರಳ,ಅ.22: ಆರ್ಥಿಕ ವಂಚನೆ ಪ್ರಕರಣವೊಂದರಲ್ಲಿ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಅರನ್ಮುಳ ಎಂಬಲ್ಲಿನ ವ್ಯಕ್ತಿಯಿಂದ 28.75 ಲಕ್ಷ ರೂಪಾಯಿಗೆ ವಂಚಿಸಲಾದ ಪ್ರಕರಣದಲ್ಲಿ ಕುಮ್ಮನಂ ರಾಜಶೇಖರನ್ರನ್ನು ಐದನೇ ಆರೋಪಿಯೆಂದು ಹೆಸರಿಸಲಾಗಿದೆ. ಕುಮ್ಮನಂರ ಮಾಜಿ ಪಿಎ ಪ್ರವೀಣ್ ಪ್ರಕರಣದ ಪ್ರಥಮ ಆರೋಪಿಯಾಗಿದ್ದಾರೆ.
ಅರನ್ಮುಳ ಎಂಬಲ್ಲಿನ ವ್ಯಕ್ತಿಯಿಂದ 28.75 ಲಕ್ಷ ರೂಪಾಯಿ ಪಡೆದು ವಂಚನೆ ನಡೆಸಲಾಗಿದೆ ಎಂದು ಅರನ್ಮುಳ ಠಾಣೆಯಲ್ಲಿ ಹರಿಕೃಷ್ಣನ್ ಎಂಬವರು ಕೇಸು ನೀಡಿದ್ದಾರೆ. ಐಪಿಸಿ 406, 420 ಪ್ರಕಾರ ಹಣದಲ್ಲಿ ವಂಚನೆ ನಡೆಸಿದ್ದು, ವಿಶ್ವಾಸ ಘಾತುಕತನಕ್ಕಾಗಿ ಕುಮ್ಮನಂ ಮತ್ತು ಅವರ ಪಿಎಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪೆಪ್ಪರ್ ಕಾಟನ್ ಮಿಕ್ಸ್ ಎಂಬ ಕಂಪೆನಿಯಲ್ಲಿ ಪಾಲುದಾರನಾಗಿಸುವುದಾಗಿ ಹೇಳಿ 28 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದರು ಎಂದು ದೂರಿನಲ್ಲಿದೆ. ಹಲವು ಬಾರಿ ಹಣ ಕೇಳಿದರು ಸಿಕ್ಕಿಲ್ಲ. ಪಾರ್ಟನರ್ಶಿಪ್ ಕೂಡ ಸಿಗಲಿಲ್ಲ ಎಂದು ದೂರುದಾರ ಹರಿಕೃಷ್ಣನ್ ತಿಳಿಸಿದ್ದಾರೆ.