ಉತ್ತರ ಪ್ರದೇಶ: ಶಾಲೆಯೊಂದರಲ್ಲಿ ಚಿರತೆ ದಾಳಿ; ಓರ್ವ ವಿದ್ಯಾರ್ಥಿಗೆ ಗಾಯ

0
277

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದ ಅಲಿಗಢದ ಶಾಲೆಯೊಂದಕ್ಕೆ ಚಿರತೆ ನುಗ್ಗಿದ ಪರಿಣಾಮ ಒಬ್ಬ ವಿದ್ಯಾರ್ಥಿ ಗಾಯಗೊಂಡ ಘಟನೆ ನಡೆದಿದೆ. ಅಲಿಗಢದ ಚೌಧರಿನಿ ಆಲ್ ಸಿಂಗ್ ಇಂಟರ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಶಾಲಾ ಕೊಠಡಿಯಲ್ಲಿ ಮಲಗಿದ್ದ ಚಿರತೆಯು ಬೆಳಿಗ್ಗೆ ವಿದ್ಯಾರ್ಥಿ ಒಳ ಪ್ರವೇಶಿಸಿದಾಗ ದಾಳಿ ನಡೆಸಿದ್ದು, ಹಿಂದಿನಿಂದ ಬಂದು ಕಚ್ಚಿದೆ. ವಿದ್ಯಾರ್ಥಿಯ ಬೆನ್ನು ಹಾಗೂ ಕೈಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಯನ್ನು ಲಕ್ಕಿರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಬೆಳಗ್ಗೆ ವಿದ್ಯಾರ್ಥಿಗಳು ಬರುವ ಮೊದಲೇ ಕ್ಲಾಸು ರೋಮ್‌ನಲ್ಲಿ ಚಿರತೆ ಪವಡಿಸಿತ್ತು. ಒಬ್ಬ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿತು. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಸ್ಕೂಲ್ ಪ್ರಿನ್ಸಿಪಾಲ್ ಯೋಗೇಶ್ ಯಾದವ್ ತಿಳಿಸಿದರು. ಚಿರತೆಯನ್ನು ತರಗತಿಯಲ್ಲಿ ಕೂಡಿ ಹಾಕಿ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ನಂತರ ವಿಷಯ ತಿಳಿದು ಊರವರು ಶಾಲೆಯ ಸುತ್ತಲೂ ಸೇರಿದ್ದರು. ವಿದ್ಯಾರ್ಥಿಗಳು ಇದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಕೊಂಡು ಹೋಗಿದ್ದಾರೆ ಎಂಬುದಾಗಿ ವರದಿಯಾಗಿದೆ.