ಕಮಲ್‍ ಹಾಸನ್‍ರ ಪಾರ್ಟಿ ನಾಯಕ ಬಿಜೆಪಿಗೆ ಸೇರ್ಪಡೆ

0
385

ಸನ್ಮಾರ್ಗ ವಾರ್ತೆ

ಚೆನ್ನೈ,ಡಿ.25: ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ತಮಿಳ್ನಾಡಿನಲ್ಲಿಯೂ ಆಟ ಮುಂದುವರಿಸಿದ್ದು ಕಮಲ್ ಹಾಸನ್‍ರ ಮಕ್ಕಳ್ ನೀತಿ ಮಯ್ಯಂ ನಾಯಕ ಎ.ಅರುಣಾಚಲಂಗೆ ಬಲೆ ಬೀಸುವಲ್ಲಿ ಯಶಸ್ವಿಯಾಗಿದೆ.

ಕಮಲ್ ಹಾಸನ್ ಪಾರ್ಟಿಗೆ ಇದು ಎದುರು ನಿಂತ ಹೊಸ ತಲೆನೋವು. ಮುಂದಿನ ವರ್ಷ ತಮಿಳ್ನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಬಿಜೆಪಿ ಇತರ ಪಾರ್ಟಿಗಳ ನಾಯಕರಿಗೆ ಬಲೆ ಹರಡಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಬಿಜೆಪಿ ನಾಯಕ ಪ್ರಕಾಶ್ ಜಾವೇಡ್ಕರ್‌ರ ಉಪಸ್ಥಿತಿಯಲ್ಲಿ ಅರುಣಾಚಲಂ ಬಿಜೆಪಿಗೆ ಸೇರಿದರು. ಮುಂದಿನ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ ತಮಿಳ್ನಾಡು ವಿಧಾನಸಭೆಗೆ ಚುನಾವಣೆಯ ನಡೆಯಲ್ಲಿದ್ದು ತಮಿಳ್ನಾಡಿನಂತೆ ಚುನಾವಣಾ ಭರದ ಕಾವೇರಿದೆ.

ಅಸದುದ್ದೀನ್ ಉವೈಸಿಯ ಎಐಎಂಐಎಂ ಪಾರ್ಟಿಯೊಂದಿಗೆ ಕಮಲ್ ಹಾಸನ್ ಪಾರ್ಟಿ ಸಖ್ಯ ಮಾಡಿಕೊಳ್ಳಲಿದೆ ಎಂದೂ ವರದಿಯಾಗಿದ್ದವು. ಪಶ್ಚಿಮ ಬಂಗಾಳದಲ್ಲಿ ಕೂಡ ಇತರ ಪಾರ್ಟಿಗಳ ನಾಯಕರಿಗೆ ಬಿಜೆಪಿ ಯಶಸ್ವಿಯಾಗಿ ಬಲೆ ಬೀಸಿದ್ದು ಅಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್‍ಗೆ ಹೆಚ್ಚು ಹಾನಿಯಾಗಿದೆ.