ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಡಿ.26: ತಮಿಳ್ನಾಡಿನಲ್ಲಿ ಕಳ್ಳನೆಂದು ಆರೋಪಿಸಿ ಕೇರಳದ ಯುವಕನನ್ನು ಜನರ ಗುಂಪು ಹೊಡೆದು ಕೊಲೆ ಮಾಡಿದ ದಾರುಣ ಘಟನೆಯು ತಮಿಳ್ನಾಡಿನ ತಿರುಚಿರಪಳ್ಳಿ ಆಲ್ಲೂರಿನಲ್ಲಿ ನಡೆದಿದೆ. ದೀಪು ಎಂಬಾತ ಜನರ ಗುಂಪಿನ ಹಲ್ಲೆಯಿಂದ ಮೃತಪಟ್ಟಿದ್ದಾನೆ.
ಮೃತ ದೀಪು ತಿರುವನಂತಪುರಂ ಮೂಲದವನಾಗಿದ್ದು, ಈತನ ಜೊತೆಗಿದ್ದ ಅರವಿಂದನ್ ಎಂಬಾತನಿಗೂ ಜನರು ಹಲ್ಲೆ ಮಾಡಿದ್ದಾರೆ. ಅರವಿಂದನ್ ಪೊಲೀಸರ ವಶದಲ್ಲಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜನರು ಇವರಿಬ್ಬರು ಕಳ್ಳತನಕ್ಕೆ ಹೊಂಚುಹಾಕುತ್ತಿದ್ದರೆಂದು ಶಂಕಿಸಿ ಥಳಿಸಲಾಗಿತ್ತು. ಕಳ್ಳತನಕ್ಕೆ ಯತ್ನಿಸಿದಾಗ ಇವರು ಸಿಕ್ಕಿಬಿದ್ದಿದ್ದರು ಎಂಬುದಾಗಿ ಪೊಲೀಸರಿಗೆ ಜನರು ಹೇಳಿದ್ದಾರೆನ್ನಲಾಗಿದೆ.