ಗಾಂಧಿ ಹತ್ಯೆ ಮಾಡಿಯೂ ಮುಗಿಯದ ಹಗೆ: ಗೋಡ್ಸೆಗೆ ಕೃತಜ್ಞತೆ ಸಲ್ಲಿಸಿದ ಟ್ವಿಟ್ಟರ್ ಪೋಸ್ಟ್ ಗಳು

0
739

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮಹಾತ್ಮಾ ಗಾಂಧಿ ಹುತಾತ್ಮ ದಿನವಾದ ಇಂದು(ಜನವರಿ ೩೦) ಟ್ವಿಟ್ಟರ್ ನಲ್ಲಿ ಪ್ರತ್ಯಕ್ಷ ವಾಗಿರುವ ಗೋಡ್ಸೆ ಬೆಂಬಲಿಗರು, ಗಾಂಧಿಯನ್ನು ಕೊಲ್ಲುವ ಮೂಲಕ ಗೋಡ್ಸೆ ದೇಶವನ್ನು ಬಚಾವ್ ಮಾಡಿದ್ದಾರೆಂಬ ಪೋಸ್ಟ್ ಗಳು ಪ್ರತ್ಯಕ್ಷವಾಗಿದೆ.

ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ ವಿನಾಯಕ್ ಗೋಡ್ಸೆಗೆ ಕೃತಜ್ಞತೆ ಸೂಚಿಸಿ ಸಂಘಪರಿವಾರದ ಬೆಂಬಲಿಗರು ಟ್ವೀಟ್ ಮಾಡಿದ್ದಾರೆ. ನಿಜವಾದ ದೇಶಪ್ರೇಮಿ ಗೋಡ್ಸೆ ಎಂದು ಹೇಳುವ ಹಲವಾರು ಟ್ವೀಟ್‍ಗಳು ಪ್ರತ್ಯಕ್ಷವಾಗಿದ್ದು, ಗಾಂಧೀಜಿಯ ದಿನದಲ್ಲಿ ನಾಥೂರಾಂ ಗೋಡ್ಸೆ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

ಗಾಂಧಿ ಹತ್ಯೆ ಮಾಡಿದ್ದರೂ ಕೂಡ ಇನ್ನೂ ಕೂಡ ದ್ವೇಷವು ಮುಗಿಯದ ಹಾಗೆ ಕಂಡು ಬಂದಿದೆ. ಗೋಡ್ಸೆಯ ಕೃತ್ಯವನ್ನು ಸಮರ್ಥಿಸುತ್ತಿರುವ ಈ ವಿಷಯವು ನಿಜಕ್ಕೂ ಇದೊಂದು ಆತಂಕಕಾರಿ ಎಂದು ಪ್ರಜ್ಞಾವಂತರು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಗೋಡ್ಸೆಗೆ ಕೃತಜ್ಞತೆ ಸಲ್ಲಿಸಿದ ಟ್ವಿಟ್ಟರ್ ಪೋಸ್ಟ್ ಗಳು