ಸನ್ಮಾರ್ಗ ವಾರ್ತೆ
ಔರಂಗಾಬಾದ್,ಮೇ,8:ಕಾಲ್ನಡಿಗೆಯಲ್ಲಿ 40 ಕಿ.ಮೀ ನಡೆದು ದಣಿದಿದ್ದ 16 ವಲಸೆ ಕಾರ್ಮಿಕರು ಔರಂಗಾಬಾದ್ ಬಳಿ ಸರಕು ರೈಲು ಡಿಕ್ಕಿ ಹೊಡೆದು ದಾರುಣ ಸಾವಿಗೀಡಾದ ಘಟನೆ ಇಡೀ ದೇಶವನ್ನೇ ಬಿಚ್ಚಿ ಬೀಳಿಸಿದೆ. ಕಾರ್ಮಿಕರೆಲ್ಲರೂ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದರು. ಔರಂಗಾಬಾದ್ನ ಕರಮದ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ರೈಲ್ವೆ ಹಳಿ ಮೇಲೆ ಕಾರ್ಮಿಕರು ಮಲಗಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
During early hours today after seeing some labourers on track, loco pilot of goods train tried to stop the train but eventually hit them between Badnapur and Karmad stations in Parbhani-Manmad section
Injureds have been taken to Aurangabad Civil Hospital.
Inquiry has been ordered— Ministry of Railways (@RailMinIndia) May 8, 2020
ಬದ್ನಾಪುರ ಮತ್ತು ಕರ್ನಾಡ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಈ ಪ್ರದೇಶವು ರೈಲ್ವೆಯ ಪರಭಾನಿ-ಮನ್ಮದ್ ವಿಭಾಗದ ಅಡಿಯಲ್ಲಿ ಬರುತ್ತದೆ. ಕಾರ್ಮಿಕರು ಶುಕ್ರವಾರ ಮುಂಜಾನೆ ರೈಲ್ವೆ ಹಳಿ ಮೇಲೆ ಮಲಗಿದ್ದರು. ಸರಕು ರೈಲಿನ ಚಾಲಕ ಅವರನ್ನು ನೋಡಿದ್ದನಲ್ಲದೇ, ಅವರನ್ನು ಉಳಿಸಲು ಸಹ ಪ್ರಯತ್ನಿಸಿದ್ದನು ಆದರೂ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.
ಕಾರ್ಮಿಕರು ಜಾಲನಾದ ಎಸ್ಆರ್ಜೆ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ರೈಲು ರಂಗಾಬಾದ್ನಿಂದ ಗುರುವಾರ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಿಗೆ ತೆರಳಿತ್ತು. ಈ ಕಾರಣಕ್ಕಾಗಿ, ಜಾಲನಾದಿಂದ ಬಂದ ಈ ಕಾರ್ಮಿಕರು ಔರಂಗಾಬಾದ್ಗೆ ತೆರಳಿದರು. ರೈಲ್ವೆ ಹಳಿಯ ಪಕ್ಕದಲ್ಲಿ 40 ಕಿ.ಮೀ ನಡೆದ ನಂತರ, ಅವ ಕರ್ಮದ್ ಬಳಿ ಹಲಿಯಲ್ಲಿಯೇ ನಿದ್ರೆಗೆ ಜಾರಿದರು. ಅಪಘಾತದಲ್ಲಿ 14 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಔರಂಗಾಬಾದ್ ಗ್ರಾಮೀಣ ಎಸ್ಪಿ ಮೋಕ್ಷದಾ ಪಾಟೀಲ್ ಹೇಳಿದ್ದಾರೆ. ನಂತರ ಇನ್ನೂ 2 ಮಂದಿ ಸಾವನ್ನಪ್ಪಿದರು. ಉಳಿದ 4 ಜನರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. “ಕಾರ್ಮಿಕರು ಮಧ್ಯಪ್ರದೇಶದ ಶಹ್ದೋಲ್ ಮತ್ತು ಉಮರಿಯಾ ಮೂಲದವರು ಎಂದು ತಿಳಿಸಿದ್ದಾರೆ.
Extremely anguished by the loss of lives due to the rail accident in Aurangabad, Maharashtra. Have spoken to Railway Minister Shri Piyush Goyal and he is closely monitoring the situation. All possible assistance required is being provided.
— Narendra Modi (@narendramodi) May 8, 2020