ಇಸ್ರೊ ವಿಜ್ಞಾನಿ ಕೊಲೆ ಆರೋಪಿ ಬಂಧನ: ಸಲಿಂಗಕಾಮಕ್ಕೆ ಸಂಬಂಧಿಸಿದ ಹಣಕಾಸು ವಿವಾದ ಕಾರಣ

0
559

ಸನ್ಮಾರ್ಗ ವಾರ್ತೆ

ಹೈದರಾಬಾದ್,ಅ.5: ಇಸ್ರೊದ ವಿಜ್ಞಾನಿ ಸುರೇಶ್ ಕುಮಾರ್(56) ಕೊಲೆಗೆ ಸಂಬಂಧಿಸಿ ಆರೋಪಿಯಾದ ಖಾಸಗಿ ಲ್ಯಾಬೊರೇಟರಿಯ ಟೆಕ್ಸಿಶಿಯನ್ ಜನಗಮ ಶ್ರೀನಿವಾಸ್(39) ಎಂಬಾತನನ್ನು ಬಂಧಿಸಲಾಗಿದೆ.

ಸಲಿಂಗಕಾಮಕ್ಕೆ ಸಂಬಂಧಿಸಿದ ಹಣಕಾಸು ವಿವಾದ ಕೊಲೆಗೆ ಕಾರಣವಾಗಿದೆ ಎಂದು ನಗರ ಪೊಲೀಸರು ತಿಳಿಸಿದರು. ಶ್ರೀವಾಸ್ ಕೇಳಿದ ಹಣ ಸುರೇಶ್ ಕೊಡದೇ ಇದ್ದುದು ಕೊಲೆಗೆ ಪ್ರೇರಣೆಯಾಗಿದೆ ಎಂದು ಶ್ರೀನಿವಾಸ್ ಪೊಲೀಸರಿಗೆ ತಿಳಿಸಿದ್ದಾನೆ.
ನ್ಯಾಶನಲ್ ರಿಮೊಟ್ ಸೆನ್ಸಿಂಗ್ ಸೆಂಟರ್‌ನ ತಾಂತ್ರಿಕ ತಜ್ಞ ಸುರೇಶ್ ಕುಮಾರ್ ಹೈದರಾಬಾದಿನಲ್ಲಿ ಒಬ್ಬರೇ ವಾಸ್ತವ್ಯ ಇದ್ದರು. ಅವರ ಕುಟುಂಬದವರೆಲ್ಲ ಚೆನ್ನೈಯಲ್ಲಿದ್ದಾರೆ. ಸೆಪ್ಟಂಬರ್ 30ರಂದು ರಾತ್ರೆ 9:30ಕ್ಕೆ ಕೇಳಿದ ಹಣ ಕೊಡದಾಗ ಶ್ರೀನಿವಾಸ್, ಚಾಕೂವಿನಿಂದ ಸುರೇಶ್ ಕುಮಾರ್‍‌ರಿಗೆ ಇರಿದು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದರು.