ಗುರ್ಗಾಂವ್ ಕಾಮಿಡಿ ಫೆಸ್ಟಿವಲ್‌ನಿಂದ ಮುನಾವರ್ ಫಾರೂಕಿಯನ್ನು ಕೈ ಬಿಟ್ಟ ಸಂಘಟಕರು: ಬಿಜೆಪಿಯಿಂದ ದೂರು ದಾಖಲು

0
239

ಸನ್ಮಾರ್ಗ ವಾರ್ತೆ

ಗುರ್ಗಾಂವ್ ಕಾಮಿಡಿ ಫೆಸ್ಟಿವಲ್‌ನ ಸಂಘಟಕರು ಹಾಸ್ಯನಟ ಮುನಾವರ್ ಫರೂಕಿಯನ್ನು “ಸಾರ್ವಜನಿಕ ಸುರಕ್ಷತೆ” ಯನ್ನು ಉಲ್ಲೇಖಿಸಿ ಪ್ರದರ್ಶನದಿಂದ ಕೈಬಿಟ್ಟಿದ್ದಾರೆ. ಅವರ ಭಾಗವಹಿಸುವಿಕೆಯನ್ನು ವಿರೋಧಿಸಿ “ಪುನರಾವರ್ತಿತ ಕರೆಗಳು” ಬಂದವು ಎಂದು ಸಂಘಟಕರು ಹೇಳಿದ್ದಾರೆ.

ಸೋಮವಾರ, ಬಿಜೆಪಿಯ ಐಟಿ ವಿಭಾಗದ ಹರಿಯಾಣದ ಮುಖ್ಯಸ್ಥ ಅರುಣ್ ಯಾದವ್‌ರವರು ಫಾರೂಕಿ ವಿರುದ್ಧ ದೂರು ದಾಖಲಿಸಿದ್ದಾರೆ. ಫಾರೂಕಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಅವರು ಫಾರೂಕಿ‌ಗೆ ಪ್ರದರ್ಶನ ಅವಕಾಶ ನೀಡದಂತೆ ನೋಡಿಕೊಳ್ಳಬೇಕೆಂದು ಪೊಲೀಸರಲ್ಲಿ ಕೇಳಿದ್ದಾರೆ.