ನಾಚಿಗೆಟ್ಟ ಸರಕಾರ ಚಿದಂಬರಂರನ್ನು ಬೇಟೆಯಾಡಲು ಯತ್ನಿಸುತ್ತಿದೆ- ಪ್ರಿಯಾಂಕಾ ಗಾಂಧಿ ಟ್ವೀಟ್

0
599

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.21: ಐಎನ್‍ಎಕ್ಸ್ ಮೀಡಿಯ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂರನ್ನು ನಾಚಿಕೆಯಿಲ್ಲದೇ ಬೇಟೆಯಾಡಲಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದು ಅವರು ಚಿದಂಬರಂರರನ್ನು ಬೆಂಬಲಿಸಿ ರಂಗಪ್ರವೇಶಿಸಿದ್ದಾರೆ. ದಶಕಗಳ ಕಾಲ ಚಿದಂಬರಂ; ಗೃಹಸಚಿವ, ವಿತ್ತಸಚಿವರಾಗಿ ಕೆಲಸ ಮಾಡಿ ದೇಶದ ವಿಶ್ವಾಸವನ್ನು ಗಳಿಸಿರುವ ವ್ಯಕ್ತಿ. ಯಾವುದೇ ಲಜ್ಜೆಯಿಲ್ಲದೇ ಇಂದಿನ ಸರಕಾರ ಕ್ರಮಕ್ಕೆ ಮುಂದಾಗುತ್ತಿದೆ.

ಚಿದಂಬರಂ ಸರಕಾರದ ಲೋಪವನ್ನು ಜನರ ಮುಂದೆ ನಿರ್ಭೀತಿಯಿಂದ ತೆರೆದಿಡುವ ಕೆಲಸ ಮಾಡುತ್ತಿದ್ದಾರೆ. ಹೇಡಿಗಳಿಗೆ ಸತ್ಯ ಗಂಟಲಲ್ಲಿ ಇಳಿಯುವುದಿಲ್ಲ. ಆದ್ದರಿಂದ ಚಿದಂಬರಂ ವಿರುದ್ಧ ಅನುಚಿತವಾಗಿ ಬೇಟೆಯಾಡುತ್ತಿದ್ದಾರೆ. ಎಂತಹ ಸ್ಥಿತಿ ಬಂದರೂ ಅವರ ಜೊತೆ ಸತ್ಯಕ್ಕಾಗಿ ಹೋರಾಡುವೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.