ಪ್ರಸಾದ ಸೇವಿಸಿ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥ

0
397

ಸನ್ಮಾರ್ಗ ವಾರ್ತೆ

ಜೈಪುರ: ಮಹಾ ಶಿವರಾತ್ರೆಯ ವೇಳೆ ಮಂದಿರದಲ್ಲಿ ನೀಡಿದ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ರಾಜಸ್ತಾನದಲ್ಲಿ ನಡೆದಿದೆ. ದಂಗಾರ್ಪುರ ಜಿಲ್ಲೆಯ ಆಶ್ಪುರ್ ಗ್ರಾಮದಲ್ಲಿ ಘಟನೆ ನಡೆದಿದ್ದು 70 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇವರ ಆರೋಗ್ಯ ಹದಗೆಟ್ಟಿದ್ದು, ಅಸ್ವಸ್ಥಗೊಂಡವರ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂದು ಆಸ್ಪುರದ ಚೀಫ್ ಮೆಡಿಕಲ್ ಆಫಿಸರ್ ತಿಳಿಸಿದರು.

ಆಹಾರದಲ್ಲಿ ವಿಷಬಾಧೆ ಆಗಿರಬಹುದೇ ಎಂದು ಶಂಕಿಸುತ್ತಿದ್ದೇವೆ ಎಂದು ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಅವರು ತಿಳಿಸಿದರು. ಪ್ರಸಾದದ ಸ್ಯಾಂಪಲ್ ಮತ್ತು ರೋಗಿಗಳಿಂದ ಶೇಖರಿಸಿದ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ವಿವರಿಸಿದರು.