ಸಿಎಎ ಹೋರಾಟದಲ್ಲಿ ಭಾಗೀಯಾದವರು ಕೌನ್ಸಿಲಿಂಗ್‍ಗೆ ಬರಬೇಕು- ಪಾಂಡಿಚೇರಿ ಯುನಿರ್ಸಿಟಿ; ಆದೇಶ ಸುಟ್ಟುಹಾಕಿದ ವಿದ್ಯಾರ್ಥಿಗಳು

0
622

ಸನ್ಮಾರ್ಗ ವಾರ್ತೆ

ಪುದಚೇರಿ, ಫೆ. 22: ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಹೋರಾಟದಲ್ಲಿ ಭಾಗವಹಿಸುವವರು ಕೌನ್ಸಿಲಿಂಗ್ ಗೆ ಹಾಜರಾಗಬೇಕೆಂದು ಪಾಂಡಿಚೇರಿ ಯುನಿವರ್ಸಿಟಿಯ ಡೆಪ್ಯುಟಿ ಡೀನ್ ಆದೇಶ ಹೊರಡಿಸಿದ್ದು ಕಾನೂನು ವಿರುದ್ಧ ರ್ಯಾಲಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಬೇಕೆಂದು ಇಲಾಖೆ ಮುಖ್ಯಸ್ಥರಿಗೆ ಡೀನ್ ಸೂಚಿಸಿದ್ದಾರೆ. ಇದರ ವರದಿಯನ್ನು ಸಲ್ಲಿಸಬೇಕೆಂದೂ ಹೇಳಿದ್ದಾರೆ.

ಇದೇ ವೇಳೆ, ಯುನಿವರ್ಸಿಟಿಯ ಕ್ರಮದ ವಿರುದ್ಧ ವಿದ್ಯಾರ್ಥಿಗಳು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಡೀನ್ ಆದೇಶ ಸುಟ್ಟುಹಾಕಿ ಅವರು ಪ್ರತಿಭಟನೆ ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲದಾಗಿಸುವ ಯತ್ನ ಯುನಿವರ್ಸಿಟಿ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪರೀಕ್ಞಾ ಶುಲ್ಕ ಹೆಚ್ಚಳ ವಿಷಯಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ಕಳೆದ ಹದಿನೈದು ದಿವಸಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.