ಸನ್ಮಾರ್ಗ ವಾರ್ತೆ
ಹೈದರಾಬಾದ್, ಜ. 21: ಎನ್ಆರ್ ಸಿ ಅಲ್ಲ ದೇಶದಲ್ಲಿರುವ ನಿರುದ್ಯೋಗಿಗಳ ಪಟ್ಟಿ ಬೇಕಾಗಿದೆ ಎಂದು ನಟ ಪ್ರಕಾಶ್ ರೈ ಹೇಳಿದರು. ಅವರು ಹೈದರಾಬಾದಿನಲ್ಲಿ ಸಿಎಎ, ಎನ್ಪಿಆರ್, ಎನ್ಆರ್ ಸಿ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತಾಡುತ್ತಿದ್ದರು. ಈ ದೇಶ ಎಲ್ಲರದ್ದು. ಮೂರು ಸಾವಿರ ಕೋಟಿ ರೂಪಾಯಿಯ ಪ್ರತಿಮೆ ದೇಶದ ಅಗತ್ಯವಲ್ಲ. ಕೆಲಸವಿಲ್ಲದ ಯುವಕರ ಮತ್ತು ಶಿಕ್ಷಣ ಸಿಗದ ಮಕ್ಕಳ ವಿವರವಾದ ಪಟ್ಟಿ ಮಾಡಬೇಕಾಗಿದೆ.
ದೇಶದ ಯುವಕರು ಪ್ರಧಾನಿಗೆ ರಾಷ್ಟ್ರಮೀಮಾಂಸೆ ಕಲಿಸಿ ಒಂದು ಡಿಗ್ರಿ ತೆಗೆದುಕೊಳ್ಳಲು ಸಹಾಯ ಮಾಡಬೇಕೆಂದು ಪ್ರಕಾಶ್ ರೈ ವ್ಯಂಗ್ಯವಾಡಿದರು.