ಚಿದಂಬರಂರನ್ನು ಮುಗಿಸಿ ಬಿಡಲು ಮೋದಿ ಸರಕಾರ ಶ್ರಮಿಸುತ್ತಿದೆ- ರಾಹುಲ್ ಗಾಂಧಿ

0
501

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ. 21: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲು ಯತ್ನ ನಡೆಯುತ್ತಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂರನ್ನು ಬೆಂಬಲಿಸಿ ರಾಹುಲ್ ಗಾಂಧಿ ರಂಗಪ್ರವೇಶಿಸಿದ್ದಾರೆ.

ಎನ್‍‌ಫೋರ್ಸ್ಮೆಂಟ್ ಡೈರಕ್ಟರೇಟ್ ಸಿಬಿಐ ಮತ್ತು ಕೆಲವು ಮಾಧ್ಯಮಗಳನ್ನು ಉಪಯೋಗಿಸಿ ಚಿದಂಬರಂರನ್ನು ಇಲ್ಲದಾಗಿಸಲು ಮೋದಿ ಸರಕಾರ ಶ್ರಮಿಸುತ್ತಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಈ ಅಧಿಕಾರ ದುರುಪಯೋಗ ನಿಂದನೀಯವಾಗಿದೆ. ಇದನ್ನು ಬಲವಾಗಿ ಖಂಡಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ಹಿಂದೆ ಪ್ರಿಯಾಂಕಾ ಗಾಂಧಿಯವರು ಕೂಡ ಚಿದಂಬರಂ ವಿರುದ್ಧ ಕ್ರಮಕ್ಕೆ ಪ್ರತಿಭಟಿಸಿ ರಂಗಪ್ರವೇಶಿಸಿದ್ದರು.