ಹೈದರಾಬಾದ್: ಬಿಜೆಪಿ ನಾಯಕನ ಹತ್ಯಾ ಯತ್ನ ವರದಿಗಳು ಸುಳ್ಳು ಹಾಗೂ ಆಧಾರ ರಹಿತ- ಪೊಲೀಸರಿಂದ ಸ್ಪಷ್ಟನೆ

0
662

ಸನ್ಮಾರ್ಗ ವಾರ್ತೆ

ಹೈದರಾಬದ್,ಡಿ.1: ತೆಲಂಗಾಣದ ಬಿಜೆಪಿ ಅಧ್ಯಕ್ಷರ ವಿರುದ್ಧ ನಡೆದಿದೆ ಎನ್ನಲಾದ ಕೊಲೆ ಯತ್ನದ ಕುರಿತಅದ ವರದಿ ಸುಳ್ಳು ಎಂದು ಪೊಲೀಸರು ತಿಳಿಸಿದ್ದು ಬಂಡಿ ಸಂಜಯ್‍ಕುಮಾರ್ ವಿರುದ್ಧ ಕೊಲೆ ಯತ್ನ ನಡೆದಿದೆ ಎನ್ನಾಲಗಿತ್ತು. ಆದರೆ ಇದು ಸುಳ್ಳು ಸುದ್ದಿಯಾಗಿದೆ ಎಂದು ಹೈದರಾಬಾದಿನ ಜಂಟಿ ಕಮಿಷನರ್ ಪಿ.ವಿಶ್ವಪ್ರಸಾದ್ ತಿಳಿಸಿದರು.

ಕೆಲವು ಮಾಧ್ಯಮಗಳು ಬಂಡಿಯವರ ವಿರುದ್ಧ ಕೊಲೆಯತ್ನ ನಡೆದಿದೆ ಎಂದು ವರದಿ ಮಾಡಿದ್ದವು. ಆದರೆ ಅಂತಹ ಘಟನೆ ನಡೆದಿಲ್ಲ. ಸುಳ್ಳು ಸುದ್ದಿ ಇದನ್ನು ನಂಬಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಇಂದು ನಡೆಯುವ ಗ್ರೇಟರ್ ಹೈದರಾಬಾದ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮತಗಳಿಸುವ ತಂತ್ರ ಇದೆಂದು ಆರೋಪವೂ ಕೇಳಿಬಂದಿದೆ.

ಎರಡು ಪಾರ್ಟಿಗಳ ನಡುವೆ ನಡೆದ ವಾಗ್ವಾದದಲ್ಲಿ ಕಾರಿನ ಗಾಜು ಒಡೆದಿತ್ತು. ಇದಕ್ಕೆ ಸಂಬಂಧಿಸಿದ ಕೇಸು ದಾಖಲಿಸಲಾಗಿದೆ. ಕೊಲೆ ಯತ್ನದಂತಹ ಕೃತ್ಯ ನಡೆದಿಲ್ಲ ಎಂದು ಹೈದರಾಬಾದಿನ ಕಮಿಷನರ್ ತಿಳಿಸಿದರು. ಈ ಹಿಂದೆ ವಿದ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಉವೈಸಿ, ಬಂಡಿ ಸಂಜಯ್ ವಿರುದ್ಧ ಹೈದರಾಬಾದ್ ಪೊಲೀಸರು ಕೇಸು ದಾಖಲಿಸಿದ್ದಾರೆ.