ಜಿಎಸ್‍ಟಿಗೆ ಸಂತಾಪ ಸೂಚಿಸಿದ ಮಾಜಿ ವಿತ್ತ ಸಚಿವ ಚಿದಂಬರಂ

0
432

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸರಕು ಸೇವಾ ತೆರಿಗೆ ಜಿಎಸ್‍ಟಿ ವಿಷಯದಲ್ಲಿ ಕೇಂದ್ರ ಸರಕಾರವನ್ನು ಮಾಜಿ ವಿತ್ತ ಸಚಿವ ಕಾಂಗ್ರೆಸ್ ಮುಂದಾಳು ಪಿ.ಚಿದಂಬರಂ ತರಾಟೆಗೆತ್ತಿಕೊಂಡು ಜಿಎಸ್‍ಟಿಗೆ ಶೋಕ ಸೂಚಿಸಿದ್ದಾರೆ.

ಜಿಎಸ್‍ಟಿ ಒಂದು ಒಳ್ಳೆಯ ಆಶಯವಾಗಿ ಆರಂಭಿಸಿದ್ದು. ಬಿಜೆಪಿ ಇದನ್ನು ಒಂದು ಕೆಟ್ಟ ಕಾನೂನು ಆಗಿ ಪರಿವರ್ತಿಸಿತು. ಭಯಾನಕವಾದ ತೆರಿಗೆ ದರ ಇದರಿಂದಾಗಿ ಆಯಿತು. ತೆರಿಗೆ ಸಂಗ್ರಹಿಸುವ ಅಧಿಕಾರಿ ಬೇಟೆಯಾಡುವ ನರಿಗಳಂತೆ ಕಾನೂನು ಉಪಯೋಗಿಸುತ್ತಿದ್ದಾರೆ. ಪ್ರತಿಯೊಬ್ಬ ಬಿಸಿನೆಸ್ ಮೆನ್ ತೆರಿಗೆ ವಂಚಕ ಎಂಬ ಸಂಶಯ ಇವರಿಗೆ ಉಂಟಾಗಿದೆ. ಜಿಎಸ್‍ಟಿ ಕೌನ್ಸಿಲ್ ಅನ್ನು ಒಂದು ಟಾಕಿಂಗ್ ಶೋ ಆಗಿ ಮಾಡಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಜಿಎಸ್‍ಟಿ ಜಾರಿಗೆ ಸಮಿತಿ (ಅಧಿಕಾರಿಗಳನ್ನೊಳಗೊಂಡ) ಶೋಷಕ ತಂಡವಾಗಿ ಪರಿವರ್ತಿತವಾಗಿದೆ. ಎನ್‍ಡಿಎ ಸಕರಾರವನ್ನು ಬೆಂಬಲಿಸುವವರ ಸಮಿತಿಯಾಗಿ ಜಿಎಸ್‍ಟಿ ಬದಲಾಯಿತು. ಜಿಎಸ್‍ಟಿ ಎಂಬ ಆಶಯ ಈಗ ಮರಣ ಹೊಂದಿದೆ ಅದಕ್ಕಾಗಿ ಸಂತಾಪ ಸೂಚಿಸುವುದಾಗಿ ಚಿದಂಬರಂ ಆರೋಪಿಸಿದ್ದಾರೆ.