ಸನ್ಮಾರ್ಗ ವಾರ್ತೆ
ಶಿರಹಟ್ಟಿ(ಗದಗ),ಮೇ,6: ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ತಾಲೂಕಿನಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದೆ.
ಬೀದಿ ಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಾಬುಸಾಬ ಲಕ್ಷೆತ್ರ್ಮೕಶ್ವರ ಮಾತನಾಡಿ, ಲಾಕ್ಡೌನ್ನಿಂದ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟದಲ್ಲಿದ್ದು, ದೈನಂದಿನ ವ್ಯಾಪಾರ ನಡೆಸಿ ಜೀವನ ನಡೆಸುವ ಕುಟುಂಬಗಳು ತೀರಾ ಸಂಕಷ್ಟದಲ್ಲಿವೆ. ಆರ್ಥಿಕ ಪ್ಯಾಕೇಜ್ನ್ನು ಘೋಷಿಸುವ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಬ್ಬೀರ ನಗಾರಿ, ರಫೀಕ ಛಬ್ಬಿ, ಮಲ್ಲೇಶ ನಾಗರಾಳ, ದೇವಪ್ಪ ಬಳ್ಳಾರಿ, ಜಯಶ್ರೀ ಕದಂ, ರಾಮೋಜಿ ಸಾವಂತ, ಹನುಮಂತ ತಳವಾರ ಮುಂತಾದವರು ಉಪಸ್ಥಿತರಿದ್ದರು.
ಓದುಗರೇ, ಸನ್ಮಾರ್ಗ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ