ಬಿಡುಗಡೆಯ ಬೆನ್ನಿಗೆ ಶಶಿಕಲಾರಿಗೆ ಇಡಿ ನೋಟಿಸ್

0
432

ಸನ್ಮಾರ್ಗ ವಾರ್ತೆ

ಚೆನ್ನೈ: ಜೈಲಿನಿಂದ ಬಿಡುಗಡೆಯಾದ ಬೆನ್ನಿಗೆ ವಿ.ಕೆ. ಶಶಿಕಲಾರನ್ನು ಪ್ರಶ್ನಿಸಲು ಎಂಫೋರ್ಸ್‍ಮೆಂಟ್ ಡೈರಕ್ಟರೇಟ್ ಮುಂದೆ ಬಂದಿದೆ. ಇಡಿ ಮುಂದೆ ಹಾಜರಾಗಲು ನೋಟಿಸು ಕಳುಹಿಸಲಾಗಿದೆ. ಫೆಬ್ರುವರಿಯಲ್ಲಿ ಹಾಜರಾಗಬೇಕೆಂದು ಸೂಚಿಸಲಾಗಿದೆ. ಕರ್ನಾಟಕದ ಬೇನಾಮಿ ಆಸ್ತಿ ಪ್ರಕರಣದಲ್ಲಿ ಇಡಿ ಚೆನ್ನೈ ಕಚೇರಿ ಶಶಿಕಲಾರಿಗೆ ನೋಟಿಸು ಕಳುಹಿಸಿದೆ.

ಅನಧಿಕೃತ ಆಸ್ತಿ ಸಂಪಾದನೆಯ ಪ್ರಕರಣದಲ್ಲಿ ಶಶಿಕಲಾರಿಗೆ ನಾಲ್ಕು ವರ್ಷ ಶಿಕ್ಷೆಯಾಗಿದ್ದು ಶಿಕ್ಷೆಯ ಅವಧಿ ಮುಗಿದಿದ್ದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆಯಲ್ಲಿದ್ದಾರೆ. ಚಿಕಿತ್ಸೆಯ ನಂತರ ಅವರು ಚೆನ್ನೈಗೆ ಮರಳಬಹುದು. ಶಿಕ್ಷೆ ಅವಧಿ ಮುಗಿಸಿಕೊಂಡು ಚೆನ್ನೈಗೆ ಮರಳುವಾಗ ಶಶಿಕಲಾರಿಗೆ ಬೃಹತ್ ಸ್ವಾಗತ ನೀಡಲು ದಿನರನ್ ಪಕ್ಷ ತೀರ್ಮಾನಿಸಿದೆ.