ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇಂದ್ರ ಸರಕಾರ ಕಾರ್ಪೊರೇಟುಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದ್ದಾರೆ.
ಮನೆಗಳನ್ನು ಕಟ್ಟಿಸಿದ್ದು, ವಿದ್ಯುತ್ ಪೂರೈಸಿರುವುದು ಧನಿಕರಿಗಲ್ಲ ಎಂದು ಹಣಕಾಸು ಸಚಿವೆ ಹೇಳಿದರು. 40 ಕೋಟಿ ಬಡವರಿಗೆ ಮೋದಿ ಸರಕಾರ ನೇರ ಹಣ ಕಳುಹಿಸಿದೆ. ರೈತರು, ಅಂಗವಿಕಲರಿಗೆ ಯೋಜನೆಯ ಲಾಭ ಸಿಕ್ಕಿದೆ. ಪ್ರಧಾನಿ ಫಸಲ್ ಬಿಮಾ ಯೋಜನೆಯಲ್ಲಿ ಒಂಬತ್ತು ಕೋಟಿ ರೈತರು ಫಲಾನುಭವಿಗಳು. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 11ಕೋಟಿ ಜನರಿಗೆ ಪ್ರಯೋಜನ ಆಗಿದೆ.
ಈ ಬಜೆಟ್ನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೊರೋನದಿಂದ ಪತನಗೊಂಡ ಅರ್ಥವ್ಯವಸ್ಥೆಯನ್ನು ಹಳಿಗೆ ತರಲು ಇರುವ ಒಂದೇ ದಾರಿ ಇದು ಎಂದು ವಿತ್ತ ಸಚಿವೆ ಹೇಳಿದರು.