ಸನ್ಮಾರ್ಗ ವಾರ್ತೆ
ಕೇರಳ: ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮಂಗಳವಾರ ಮನೆಗೆ ಫೊನ್ ಕರೆ ಮಾಡಿದ್ದಾರೆ. ಸಂಜೆ ಮೂರಕ್ಕೆ ಕಪ್ಪನ್ ಪೋನ್ ಮಾಡಿದರು. ಪತ್ನಿ ಮಕ್ಕಳೊಂದಿಗೆ ಹತ್ತು ನಿಮಿಷ ಮಾತಾಡಿದರು.
ತಾನು ಸುರಕ್ಷಿತವಾಗಿದ್ದೇನೆ. ಆರೋಗ್ಯದ ವಿಷಯದಲ್ಲಿ ಜೈಲಧಿಕಾರಿಗಳು ಗಮನಹರಿಸುತ್ತಿದ್ದಾರೆ ಎಂದು ಅವರು ಮನೆ ಮಂದಿಗೆ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ನವೆಂಬರ್ 2ರಂದು ಮನೆಯವರಿಗೆ ಅವರು ಫೋನ್ ಮಾಡಿದ್ದರು.
ಅಕ್ಟೋಬರ್ ಐದರಂದು ಹಾಥ್ರಸ್ಗೆ ಬೇರೆ ಮೂವರ ಜತೆ ಪ್ರಯಾಣಿಸುತ್ತಿದ್ದ ವೇಳೆ ಸಿದ್ದೀಕ್ ಕಪ್ಪನ್ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.