ಟಿ.ಕೆ ಅಬ್ದುಲ್ಲಾ ಕಾಲದೊಂದಿಗೆ ಸಂಚರಿಸಿದ ವಿದ್ವಾಂಸ: ಟಿ. ಆರಿಫಲಿ

0
469

ಸನ್ಮಾರ್ಗ ವಾರ್ತೆ

ಆಲುವ: ಟಿಕೆ ಅಬ್ದುಲ್ಲಾ ಮೌಲವಿ ಕಾಲದೊಂದಿಗೆ ಜ್ಞಾನ ಸಂಪಾದಿಸಿ ಸಮಾಜದೊಂದಿಗೆ ಸಂವಾದಿಸಿದ ಬುದ್ಧಿಜೀವಿ ಹಾಗೂ ವಿದ್ವಾಂಸರಾಗಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ.ಆರಿಫಲಿ ಹೇಳಿದರು.

ಸೋಲಿಡಾರಿಟಿ ಜಿಲ್ಲಾ ಸಮಿತಿ ಸಂಘಟಿಸಿದ ಅನುಸ್ಮರಣೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಮುಸ್ಲಿಂ ಸಮುದಾಯದ ಕುರಿತು ಚಿಂತಿಸುತ್ತಿದ್ದ ಅವರು ಬರಹ ಭಾಷಣಗಳಲ್ಲಿ ಅದನ್ನು ಉಲ್ಲೇಖಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹೆಚ್ಚು ಎಚ್ಚರಿಕೆ ಸರಳತೆಯನ್ನು ಅಳವಡಿಸಿಕೊಂಡಿದ್ದರು. ಸಮುದಾಯವು ಕುರ್‍ಆನಿಕ ದೌತ್ಯವನ್ನು ವಹಿಸಿಕೊಳ್ಳುವಂತೆ ಆಹ್ವಾನವನ್ನು ಅವರು ತಮ್ಮ ಭಾಷಣಗಳಲ್ಲಿ ಕರೆ ನೀಡುತ್ತಿದ್ದರು ಎಂದು ಮಾಜಿ ಶಾಸಕ ಟಿ.ಎ ಅಹ್ಮದ್ ಕಬೀರ್ ಹೇಳಿದರು.

ಜಮಾಅತೆ ಇಸ್ಲಾಮೀ ಕೇರಳ ಅಸಿಸ್ಟೆಂಟ್ ಕಾರ್ಯದರ್ಶಿ ಎನ್‍ಎಂ ಅಬ್ದುಲ್ ರಹ್ಮಾನ್,  ಸಾಲಿಡಾರಿಟಿ ರಾಜ್ಯ ಕಾರ್ಯದರ್ಶಿ ಒಕೆ ಫಾರಿಸ್,  ಕೆಎ ಕಾಸಿಂ ಮೌಲವಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಕೆ ಸಲೀಂ ಅಧ್ಯಕ್ಷತೆ ವಹಿಸಿದ್ದರು. ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಪಿಎನ್ ನಿಯಾಝ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪಿಎ ಅನ್ವರ್ ಕೃತಜ್ಞತೆ ಸಲ್ಲಿಸಿದರು.