ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಕ್ರೌರ್ಯ ಹೆಚ್ಚುತ್ತಿದೆ: ಸೋನಿಯಾ ಗಾಂಧಿ ಹೇಳಿಕೆ

0
230

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಕ್ರೌರ್ಯ ಹೆಚ್ಚಳವಾಗುತ್ತಿದೆ. ಮೋದಿ ತನಿಖಾ ಸಂಸ್ಥೆಗಳನ್ನು ದುರುಪಯೋಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಆರೋಪಿಸಿದರು. ಅವರು ಕಾಂಗ್ರೆಸ್‌ ಆಯೋಜಿಸಿದ ‘ಚಿಂತನ್ ಶಿವಿರ್’‌ ಉದ್ಘಾಟಿಸಿ ಮಾತಾಡುತ್ತಿದ್ದರು.

ಜನರು ಭಯಭೀತರಾಗಿ ಬದುಕುವ ಅವಸ್ಥೆ ದೇಶದಲ್ಲಿದೆ. ಬಿಜೆಪಿ ಆರೆಸ್ಸೆಸ್ ವಿರುದ್ಧ ಚರ್ಚೆ ನಡೆಸಬೇಕಾದ ಸಮಯವಿದು. ಅಲ್ಪಸಂಖ್ಯಾತರ ವಿರುದ್ಧ ಕ್ರೌರ್ಯ ದೇಶದಲ್ಲಿ ಮುಂದುವರಿಯುತ್ತಿದೆ. ಅಲ್ಪಸಂಖ್ಯಾತರು ಈ ದೇಶದ ಅವಿಭಾಜ್ಯ ಘಟಕವಾಗಿದ್ದಾರೆ. ನೆಹರೂರಂತಹ ನಾಯಕರ ತ್ಯಾಗ ಕೊಡುಗೆಗಳನ್ನು ಕೇಂದ್ರ ಸರಕಾರ ಇಲ್ಲದಾಗಿಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು. ದೇಶಾದ್ಯಂತ ಉನ್ನತ ನಾಯಕರು ಚಿಂತನ್ ಶಿವಿರ್‌ನಲ್ಲಿ ಭಾಗವಹಿಸಿದರು.