ಸನ್ಮಾರ್ಗ ವಾರ್ತೆ
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ ಕಿರುಕುಳದಿಂದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಮೃತಪಟ್ಟಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಮೃತಪಟ್ಟಿದ್ದು ಮೋದಿಯ ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಆಗಿತ್ತು. ಹಿರಿಯ ಬಿಜೆಪಿ ನಾಯಕ ವೆಂಕಯ್ಯ ನಾಯಿಡುರಂತಹವರನ್ನು ಮೋದಿ ಮೂಲೆಗೊತ್ತಿದರು. ನೀವು ಎಲ್ಲರನ್ನೂ ಮೂಲೆಗೊತ್ತಿದಿರಿ. ಅರುಣ್ ಜೇಟ್ಲಿ ಮೋದಿಯ ಕಿರುಕುಳದಿಂದ ಮೃತಪಟ್ಟರು. ನಾನು ತಮಿಳ್ನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿಯಲ್ಲ. ನಿಮಗೆ ಎಂದೂ ತಲೆ ತಗ್ಗಿಸಲಾರೆ. ನಾನು ಕಲೈಂಜರ್ರ ಮೊಮ್ಮಗ ಎಂದು ಉದಯನಿಧಿ ಹೇಳಿದರು.
ಇದೇ ವೇಳೆ ಉದಯನಿಧಿ ಸ್ಟಾಲಿನ್ ಹೇಳಿಕೆಯ ವಿರುದ್ಧ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ರ ಮಕ್ಕಳು ರಂಗಪ್ರವೇಶಿಸಿದರು. ನಮ್ಮ ಅಮ್ಮನ ಸ್ಮರಣೆಯನ್ನು ಚುನಾವಣಾ ರಾಜಕೀಯಕ್ಕೆ ಉಪಯೋಗಿಸಬೇಡಿರಿ. ನಿಮ್ಮ ಹೇಳಿಕೆ ಸುಳ್ಳು. ನಮಗೆ ನರೇಂದ್ರ ಮೋದಿ ಎಲ್ಲ ರೀತಿಯ ಗೌರವ ಕೊಟ್ಟಿದ್ದಾರೆ ಎಂದು ಸುಷ್ಮಾ ಸ್ವರಾಜ್ ಎಂದು ಪುತ್ರಿ ಬಾನ್ಸುರಿ ಸ್ವರಾಜ್ ಹೇಳಿದರು.
ಉದಯನಿಧಿಯ ಹೇಳಿಕೆಯ ವಿರುದ್ಧ ಅರುಣ್ ಜೇಟ್ಲಿಯವರ ಮಗಳು ಸೋನಾಲಿ ಜೇಟ್ಲಿ ಚುನಾವಣೆ ಒತ್ತಡ ನಮಗೆ ಚೆನ್ನಾಗಿ ಗೊತ್ತು. ಆದರೆ, ನೀವು ಸುಳ್ಳು ಹೇಳುವಾಗ ಸುಮ್ಮನಿರಲು ಸಾಧ್ಯವಿಲ್ಲ. ದಯವಿಟ್ಟು ತಂದೆಯ ಸ್ಮರಣೆಗಳನ್ನು ಅಪಮಾನಿಸಬೇಡಿರಿ ಎಂದು ಸೋನಾಲಿ ಹೇಳಿದರು.