ಸನ್ಮಾರ್ಗ ವಾರ್ತೆ
ಚೆನ್ನೈ, ಫೆ. 17: ಸಾರ್ವಜನಿಕ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆ ಮಾಡಿದನೆಂದು ಆರೋಪಿಸಿ ದಲಿತ ಯುವಕನನ್ನು ಜನರ ಗುಂಪು ಹೊಡೆದು ಕೊಂದು ಹಾಕಿದೆ. ಆದಿ ದ್ರಾವಿಡ ವಿಭಾಗದ, ಪೆಟ್ರೋಲ್ ಪಂಪ್ ಉದ್ಯೋಗಿ ವಿಯುಪ್ಪುರಂ ಎಸ್ ಪುದೂರ್ ಕಾರೈ ಗ್ರಾಮದ ಆರ್. ಶಕ್ತಿವೇಲು(24) ಕೊಲೆಯಾದ ನತದೃಷ್ಟ ವ್ಯಕ್ತಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿ ವಣ್ಣಿಯರ್ ಸಮುದಾಯದ ದಂಪತಿ ಸಹಿತ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ತಿಂಗಳು ಹನ್ನೆರಡನೆ ತಾರೀಕಿಗೆ ಮಧ್ಯಾಹ್ನ ಎರಡು ಗಂಟೆಗೆ ಘಟನೆ ನಡೆದಿತ್ತು. ಯುವಕ ರಸ್ತಬದಿ ನಿರ್ಜನ ಸ್ಥಳದಲ್ಲಿ ವಿಸರ್ಜನೆ ಮಾಡಿದ್ದ. ಇದನ್ನು ನೋಡಿದ ಮಹಿಳೆ ಜನರನ್ನು ಕರೆಯಿಸಿದ್ದಾಳೆ . ಯುವಕ ದಲಿತ ಎಂದು ತಿಳಿದಾಗ ಆತನ ಕೈಕಾಲು ಕಟ್ಟಿ ನಿರ್ದಯವಾಗಿ ಹೊಡೆದಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಹಸುಗೂಸಿನೊಂದಿಗೆ ಬಂದ ಶಕ್ತಿವೇಲುನ ಸಹೋದರಿ ದೈವಾನರಿಗೂ ಪೆಟ್ಟು ಬಿದ್ದಿದೆ. ಶಕ್ತಿವೇಲುರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ರಕ್ಷಿಸಲು ಸಾಧ್ಯವಾಗಿಲ್ಲ.